ನಾನು ಏಕಾಂಗಿ ಅಲ್ಲ, ನನ್ನ ಜೊತೆ 20 ಮಂದಿ ಶಾಸಕರಿದ್ದಾರೆ: ಎಂ.ಬಿ.ಪಾಟೀಲ್

Public TV
1 Min Read

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರ್ಕಾರದಲ್ಲಿ ಭಿನ್ನಮತ ತೀವ್ರಗೊಂಡಿದ್ದು, ನಾನು ಏಕಾಂಗಿ ಅಲ್ಲ. ನನ್ನ ಜೊತೆ 20 ಮಂದಿ ಶಾಸಕರು ಇದ್ದಾರೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಆಕ್ರೋಶದಿಂದ ಹೇಳಿದ್ದಾರೆ.

ನಾಯಕರ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಅವರು, ಕುಮಾರಸ್ವಾಮಿ ಸಂಮ್ಮಿಶ್ರ ಸರ್ಕಾರದ ನೇತೃತ್ವವನ್ನು ವಹಿಸಿಕೊಂಡು ಮುಖ್ಯಮಂತ್ರಿ ಆದವರು. ಅವರಿಗೂ ನಮ್ಮ ಪಕ್ಷದಲ್ಲಿ ಆಗಿರುವ ಬೆಳವಣಿಗೆಗೆ ಸಂಬಂಧ ಇಲ್ಲ. ನಮ್ಮದೇನಿದ್ದರೂ ಪಕ್ಷದ ಒಳಗಡೆ ಇರುತ್ತದೆ. ನಾನು ಇವತ್ತು ಏಕಾಂಗಿ ಅಲ್ಲ, ನನ್ನ ಜೊತೆಗೆ ಅನೇಕ ಸ್ನೇಹಿತರಿದ್ದಾರೆ ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿ, ನಾಗರಾಜ್ ಸೇರಿದಂತೆ ನಾವು 15-20 ಮಂದಿ ಶಾಸಕರಿದ್ದೇವೆ. ನಾವು ಪಕ್ಷವನ್ನು ಹೇಗೆ ಬಲಿಷ್ಠ ಮಾಡಬೇಕು. ಹೇಗೆ ಮುಂದುವರಿಸಬೇಕು ಎಂದು ಸಭೆ ಮಾಡುತ್ತಿದ್ದೇವೆ. ಅದು ಬಿಟ್ಟು ಇಲ್ಲಿ ಯಾರು ಪಕ್ಷ ಬಿಡಬೇಕು ಎಂದು ಚರ್ಚೆ ಮಾಡುತ್ತಿಲ್ಲ ಎಂದರು.

ಶೀಘ್ರವಾಗಿ ನಾವೆಲ್ಲರೂ ಕೂಡಿ ಚರ್ಚೆ ಮಾಡುತ್ತೇವೆ. ಆಗ ಎಲ್ಲರ ಭಾವನೆ, ಅಭಿಪ್ರಾಯವನ್ನು ಪಡೆಯುತ್ತೇವೆ. ಮುಂದೆ ಯಾವ ರೀತಿ ನಡೆದುಕೊಳ್ಳಬೇಕು ಎಂದು ತೀರ್ಮಾನ ಮಾಡುತ್ತೇವೆ. ಆದರೆ ನಮ್ಮ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ತಲೆ ಬಾಗುತ್ತೇವೆ. ನಾವು ಕಾಂಗ್ರೆಸ್ಸಿಗೆ ದ್ರೋಹ ಮಾಡುವುದಿಲ್ಲ ಎಂದು ಪಾಟೀಲ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *