ಸಚಿವ ಎಂ.ಬಿ.ಪಾಟೀಲ್ ರಿಂದ ಹೊಸ `ಸಿಡಿ’ ಬಾಂಬ್!

Public TV
1 Min Read

ವಿಜಯಪುರ: ಸ್ವಾಮೀಜಿಯೊಬ್ಬರು ನಾನು ಸರ್ವನಾಶವಾಗಲಿ ಎಂದು ಬಹಿರಂಗವಾಗಿ ಹೇಳಿದ್ದಾರೆ. ಒಂದು ವೇಳೆ ವಿಡಿಯೋವನ್ನು ನಾನು ಪೊಲೀಸರಿಗೆ ನೀಡಿದರೆ ಸ್ವಾಮೀಜಿಗಳು ಜೈಲಿಗೆ ಹೋಗ್ತಾರೆ. ಆದರೆ ನಾನು ಆ ರೀತಿ ಮಾಡುವುದಿಲ್ಲ ಜಲಸಂಪನ್ಮೂಲಕ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

ಸಿದ್ದಗಂಗಾ ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ ಎಂದದ್ದು ಸತ್ಯ. ಅದು ಸುಳ್ಳಾದರೆ ನಾನು ನನ್ನ ಕುಟುಂಬ ಸಮೇತ ಸಿದ್ದಗಂಗಾ ಮಠದಲ್ಲಿ ತಲೆ ಹಸಿ ಮಾಡಿಕೊಂಡು ಪ್ರಮಾಣ ಮಾಡುತ್ತೇನೆ. ನಾನು ಸುಳ್ಳು ಮಾತನಾಡಿದ್ದರೆ ನಮ್ಮ ಕುಟುಂಬವೇ ಸರ್ವನಾಶವಾಗಲಿ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದರು.

ಅಂದು ಶ್ರೀಗಳು ಹೇಳಿದ್ದನ್ನು ನಾನು ಸ್ಪಷ್ಟವಾಗಿ ಅರ್ಥೈಸಿಕೊಂಡಿದ್ದೇನೆ. ಆದ್ರೆ ತುಮಕೂರು ಮಾಜಿ ಸಂಸದ ಬಸವರಾಜ್, ಮಾಜಿ ಸಿಎಂ ಯಡಿಯೂರಪ್ಪ, ವಿ.ಸೋಮಣ್ಣ ತಪ್ಪು ಅರ್ಥ ಕಲ್ಪಿಸುತ್ತಿದ್ದಾರೆ. ಯಡಿಯೂರಪ್ಪವರು ಜೈಲಿಗೆ ಹೋದಾಗ ವಿ.ಸೋಮಣ್ಣವರು ಸಿದ್ದಗಂಗಾ ಶ್ರೀಗಳನ್ನು ಜೈಲು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿ ಶ್ರೀಗಳನ್ನ ಸಣ್ಣವರನ್ನಾಗಿ ಮಾಡಿದ್ದರು. ಈಗಲೂ ಅದೇ ಕೆಲಸವನ್ನ ಮಾಡಲಾಗುತ್ತಿದೆ ಎಂದರು.

ಶ್ರೀಗಳು ಹೇಳಿದನ್ನು ತಿರುಚಿ ಈಗಲೂ ಸಣ್ಣವರನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಹೀಗೇನಾದ್ರು ಮಾಡಿದ್ರೇ ಶ್ರೀಗಳ ಘನತೆ ಕುಂದಿಸಿದಂತಾಗುತ್ತದೆ. ಮಠದ ಮರ್ಯಾದೆಯನ್ನ ಮಣ್ಣು ಪಾಲು ಮಾಡಿದಂತಾಗುತ್ತೆ ಎಂದು ಯಡಿಯೂರಪ್ಪ, ಸೋಮಣ್ಣ, ಬಸವರಾಜ್ ವಿರುದ್ಧ ಎಂ.ಬಿ.ಪಾಟೀಲ್ ಕಿಡಿಕಾರಿದರು.

https://www.youtube.com/watch?v=_fdNAoDD1uo

Share This Article
Leave a Comment

Leave a Reply

Your email address will not be published. Required fields are marked *