ಕೊಚ್ಚಿಯಲ್ಲಿ ಧರೆಗುರುಳಿದ ಅಕ್ರಮ ಕಟ್ಟಡಗಳು- ಬೆಂಗ್ಳೂರಲ್ಲಿ ಕೆರೆದಂಡೆಯ ಮನೆಯವರಿಗೆ ಢವ ಢವ

Public TV
1 Min Read

ಬೆಂಗಳೂರು: ಕೇರಳದ ಕೊಚ್ಚಿಯಲ್ಲಿ ಕೋಟಿಗಟ್ಟಲೇ ಮೌಲ್ಯದ ಕಟ್ಟಡಗಳು ಉರುಳಿವೆ. ಕೊಚ್ಚಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಕೆರೆ ಭೂಮಿಗಳ್ಳರಿಗೆ ನಡುಕ ಶುರುವಾಗಿದೆಯಾ? ಲೇಕ್ ವ್ಯೂವ್ ಪಾಯಿಂಟ್ ಮೂಡ್ ನಲ್ಲಿದ್ದವರು ಆತಂಕಗೊಂಡಿದ್ದಾರೆ. ಬೆಂಗಳೂರಿನಲ್ಲೂ ಕೊಚ್ಚಿ ಮಾದರಿಯಲ್ಲಿ ಶುರುವಾಗುತ್ತಾ ಎಂಬ ಪ್ರಶ್ನೆಗಳು ಮೂಡಿವೆ.

ಕೇರಳದಂತೆ ಬೆಂಗಳೂರಿನಲ್ಲೂ ಅಕ್ರಮ ಗಗನಚುಂಬಿ ಕಟ್ಟಡಗಳಿದೆ ಇದೇ ಸ್ಥಿತಿಯಾಗುತ್ತಾ ಎಂಬ ಚರ್ಚೆ ಶುರುವಾಗಿದೆ. ಬೆಂಗಳೂರಿನಲ್ಲಿಯೂ ಸಾಕಷ್ಟು ಕೆರೆಯನ್ನು ನುಂಗಿ ನಿರ್ಮಾಣವಾಗಿರುವ ಕಟ್ಟಡದ ಸಂಖ್ಯೆ ಅತ್ಯಧಿಕವಾಗಿದೆ. ಕೊಚ್ಚಿಯಲ್ಲಿ ನಡೆದ ಘಟನೆ ಬೆನ್ನಲ್ಲೆ ಬೆಂಗಳೂರಿನಲ್ಲಿ ಮೇಯರ್ ಆಯುಕ್ತರ ಜೊತೆ ಸಭೆ ಚರ್ಚೆ ನಡೆಸಿ, ಬಫರ್ ಝೋನ್ ಗೊಂದಲ, ಹಾಗೂ ಕೆರೆಯ ಪಕ್ಕ ನಿರ್ಮಾಣವಾಗಿರುವ ಕಟ್ಟಡಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಎನ್.ಜಿ.ಟಿ ಆದೇಶದ ಪ್ರಕಾರ ಕೆರೆಯ 72 ಮೀಟರ್ ಪರಿದಿಯಲ್ಲಿ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಆದರೆ ಸುಪ್ರೀಂ ಕೋರ್ಟ್ ನಲ್ಲಿ ಈ ಪರಿದಿ ಬಗ್ಗೆ ಸ್ಟೇ ಇದೆ. ಹಾಗಾಗಿ ಬಿಬಿಎಂಪಿ ಮೂವತ್ತು ಮೀಟರ್ ಅಂತಾನೇ ಪರಿಗಣನೆ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಸುಪಾಸು ಹತ್ತೊಂಬತ್ತು ಲಕ್ಷ ಕಟ್ಟಡ ಇದೆ. ಅದರಲ್ಲಿ ಬಿಬಿಎಂಪಿ ಅನುಮತಿ ಪಡೆಯದೆ ಬಿ ಖಾತಾ ಇರುವ ಮೂರು ಲಕ್ಷ ಕಟ್ಟಡಗಳು ಹಾಗೂ ಕೃಷಿ ಜಮೀನಿನಲ್ಲೂ ಕಟ್ಟಡವಿದೆ. ಒಟ್ಟು ಮೂರು ಲಕ್ಷ ಅದನ್ನು ಅನಧಿಕೃತ ಎಂದೂ ಪರಿಗಣಿಸಲಾಗಿದೆ. ರಾಜಕಾಲುವೆ ವ್ಯಾಪ್ತಿಯಲ್ಲಿ 2,626 ಅನಧಿಕೃತ ಕಟ್ಟಡವಿದೆ. ಒಟ್ಟು ಹತ್ತು ಕೆರೆಯಲ್ಲಿ ಭೂ ಒತ್ತುವರಿಯ ಸಂಪೂರ್ಣ ಚಿತ್ರಣ ಸಿಕ್ಕಿದ್ದು ಆರು ಕೆರೆಯ ಒತ್ತುವರಿ ಬಿಡಿಸಿ ಪೆನ್ಸಿಂಗ್ ಹಾಕಲಾಗಿದೆ.

ಸುಪ್ರೀಂ ಕೋರ್ಟ್ ನಲ್ಲಿ ಅಕ್ರಮ – ಸಕ್ರಮದ ತೀರ್ಪಿಗೆ ಬಿಬಿಎಂಪಿ ಕಾಯುತ್ತಿದ್ದು ತದನಂತರ ಕೆರೆಯಂಗಳದಲ್ಲಿ ಅನಧಿಕೃತ ಕಟ್ಟಡ ತೆರವಿನ ಬಗ್ಗೆ ಪ್ಲಾನ್ ರೂಪಿಸಲಿದೆ. ಈಗಾಗಲೇ ಬಿಬಿಎಂಪಿಗೆ ಕೆರೆಯ ಪಕ್ಕ ಕಟ್ಟಡ ನಿರ್ಮಿಸಿದವರಿಗೆ ನೋಟಿಸ್ ಕೊಡಲಾಗಿದೆ. ಆದರೆ ಕೋರ್ಟ್ ನಲ್ಲಿ ಹೋಗಿ ಸ್ಟೇ ತರೋದ್ರಿಂದ ಕಾನೂನಾತ್ಮಕ ತೊಡಕು ಎದುರಾಗುತ್ತಿದೆ. ಈ ಬಾರಿ ಅಕ್ರಮ – ಅಕ್ರಮದ ಸ್ಪಷ್ಟ ಚಿತ್ರಣ, ಬಫರ್ ಝೋನ್ ಗೊಂದಲ ನಿವಾರಣೆಯಾದ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *