ಈಶ್ವರ್ ಖಂಡ್ರೆಗೆ ನಿಂಬೆಹಣ್ಣು ಕೊಟ್ರು ಐಜಿ ಸನದಿ

Public TV
1 Min Read

ಹುಬ್ಬಳ್ಳಿ: ಎರಡು ನಿಂಬೆಹಣ್ಣು ನೀಡಿ, ವಿಶೇಷ ರೀತಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಈಶ್ವರ್ ಖಂಡ್ರೆ ಅವರನ್ನು ಮಾಜಿ ಸಂಸದ ಐಜಿ ಸನದಿ ಸ್ವಾಗತಿಸಿದ್ದಾರೆ.

ಸನದಿ ನೀಡಿದ ನಿಂಬೆ ಹಣ್ಣನ್ನು ನಗುನಗುತ್ತಲೇ ಸ್ವೀಕರಿಸಿ, ಇದು ಶುಭದ ಸಂಕೇತ ಎಂದರು. ಬಳಿಕ ಮಾಧ್ಯಮಗೋಷ್ಠಿ ಮುಗಿಯುವವರೆಗೂ ಎರಡು ನಿಂಬೆಹಣ್ಣು ಕೈಯಲ್ಲಿ ಹಿಡಿದುಕೊಂಡೇ ಖಂಡ್ರೆ ಕುಳಿತಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿತ್ತು. ಆದರೆ 2018ರ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ. ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಸರಿಯಾಗಿ ಮನೆ ಮನೆಗೆ ತಲುಪಿಸಲು ಆಗಲಿಲ್ಲ. ಹೀಗಾಗಿ ನಾವು ಸೋಲಬೇಕಾಯಿತು. ಪಕ್ಷವನ್ನು ಬೇರು ಮಟ್ಟದಿಂದ ಭದ್ರಗೊಳಿಸಲು ಪ್ರವಾಸ ಕೈಗೊಂಡಿರುವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಸುಳ್ಳು ಭರವಸೆ ನೀಡಿ, ಮೊಸ ಮಾಡಿದ್ದಾರೆ. ಅವರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ಶೇಕಡ 100 ರಷ್ಟು ಕೆಲಸ ಮಾಡಿ ಶೇಕಡಾ 5ರಷ್ಟು ಮಾತ್ರ ಹೇಳಿಕೊಳ್ಳುತ್ತೇವೆ. ಆದರೆ ಬಿಜೆಪಿಯವರ ಬಾಯಿ ಬೊಂಬೈ ಆಗಿದೆ. ಸುಳ್ಳನ್ನು ಸತ್ಯ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *