ಮೋದಿ ಕ್ರಮ ಕೈಗೊಳ್ಳದಿದ್ರೆ ನಾನೇ ಸೇಡು ತೀರಿಸ್ಕೊಳ್ತೀನಿ: ಕುಪ್ವಾರದಲ್ಲಿ ಹುತಾತ್ಮ ಯೋಧನ ತಾಯಿ

Public TV
1 Min Read

ನವದೆಹಲಿ: ಮೋದಿ ಕ್ರಮ ಕೂಗೊಳ್ಳಲು ವಿಫಲರಾದ್ರೆ ನಾನೇ ನನ್ನ ಮಗನ ಸಾವಿಗೆ ಸೇಡು ತೀರಿಸಿಕೊಳ್ತೀನಿ ಎಂದು ಕುಪ್ವಾರದಲ್ಲಿ ಹುತಾತ್ಮರಾದ ಯೋಧರೊಬ್ಬರ ತಾಯಿ ಹೇಳಿಕೆ ನೀಡಿದ್ದಾರೆ.

ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ಮತ್ತು ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಸೇರಿ ಮೂವರು ಯೋಧರು ಗುರುವಾರದಂದು ಹುತಾತ್ಮರಾಗಿದ್ದರು. ಕ್ಯಾಪ್ಟನ್ ಆಯುಷ್ ಯಾದವ್, ಜೆಸಿಒ ಭೂಪ್ ಸಿಂಗ್ ಗುಜ್ಜರ್ ದುಸ್ಸಾ ಹಾಗೂ ನಾೈಕ್ ವೆಂಕಟ್ ರಮಣ್ ಹುತಾತ್ಮರಾದ ಸೈನಿಕರು. ಇಬ್ಬರು ಉಗ್ರರನ್ನು ಸೇನಾ ಪಡೆ ಹೊಡೆದುರುಳಿಸಿತ್ತು.

25 ವರ್ಷದ ಮಗ ಆಯುಷ್ ಯಾದವ್ ಉಗ್ರರ ದಾಳಿಗೆ ಬಲಿಯಾಗಿರೋದ್ರಿಂದ ಮನನೊಂದ ತಾಯಿ, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿಯನ್ನ ಒತ್ತಾಯಿಸಿದ್ದಾರೆ. ಒಂದು ವೇಳೆ ಪ್ರಧಾನಿಯವರಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ರೆ ನಾನೇ ಮಗನ ಸಾವಿನ ಸೇಡು ತೀರಿಸುತ್ತೇನೆ ಅಂತಾ ತಿಳಿಸಿದ್ದಾರೆ.

ಆಯುಷ್ ಯಾದವ್ ತಂದೆ ಅರುಣ್ ಕಂಟ್ ಯಾದವ್ ಕೂಡ ಉಗ್ರರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದು, ಈ ರೀತಿ ನಮ್ಮ ಮಕ್ಕಳು ಹತ್ಯೆಯಾಗೋದನ್ನ ಎಲ್ಲಿಯತನಕ ನೋಡಿಕೊಂಡಿರಲು ಸಾಧ್ಯ? ಎಂದಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಹೋರಾಟಗಾರರ ಬಗ್ಗೆ ಕಿಡಿಕಾರಿದ ಅವರು, ಇಂತಹ ಘಟನೆಗಳ ಬಗ್ಗೆ ಅವರು ತುಟಿ ಬಿಚ್ಚಲ್ಲ. ಸೈನಿಕರು ಪ್ರತೀಕಾರ ತೀರಿಸಿಕೊಂಡಾಗ ಮಾನವ ಹಕ್ಕುಗಳ ಹೋರಾಟಗಾರರು ದೂರುತ್ತಾರೆ. ಆದ್ರೆ ಈ ಘಟನೆ ಅವರಿಗೇನೂ ಅಲ್ಲ. ಜೀಪ್‍ಗೆ ವ್ಯಕ್ತಿಯನ್ನು ಕಟ್ಟಿದಾಗ ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ, ತನಿಖೆಗಳು ನಡೆಯುತ್ತದೆ, ಕ್ರಮ ಕೈಗೊಳ್ತಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ರು.

ನನ್ನ ಅಣ್ಣನ ಮಗಳು ಮತ್ತು ಆಕೆಯ ಗಂಡ ಇಬ್ಬರೂ ಮೇಜರ್‍ಗಳಾಗಿದ್ದಾರೆ. ನನ್ನ ಮಗ ಬದುಕಿದ್ದರೆ ಮುಂದೊಂದು ದಿನ ಆತನೂ ಮೇಜರ್ ಆಗ್ತಿದ್ದ ಅಂತಾ ಯಾದವ್ ಹೇಳಿದ್ರು.

ದೇಶದಲ್ಲಿ ಯಾವ ರೀತಿಯ ವಾತಾವರಣ ಇದೆ ಅಂತ ನೀವು ನೋಡಬಹುದು. ಬಲವಾದ ನೀತಿ ಇಲ್ಲದಿದ್ರೆ ಮತ್ತು ಸೂಕ್ತ ಕ್ರಮ ಕೈಗೊಳ್ಳದಿದ್ರೆ ಇದು ಮುಂದುವರೆಯುತ್ತದೆ. ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಏನಾದ್ರೂ ಮಾಡಲೇಬೇಕು. ಬೇರೆ ಯಾರ ಮಕ್ಕಳಿಗೂ ಈ ರೀತಿ ಆಗಬಾರದು ಅಂತ ಯಾದವ್ ಮರುಗಿದ್ರು.

Share This Article
Leave a Comment

Leave a Reply

Your email address will not be published. Required fields are marked *