ಹಿಂದೂ ವಿರೋಧಿಯಾಗಿದ್ದಲ್ಲಿ ನಾನೇ ಸರ್ವನಾಶವಾಗ್ಲಿ- ಕಾಯಿ ಇಟ್ಟು ಕಾಂಗ್ರೆಸ್ ಅಭ್ಯರ್ಥಿ ಆಣೆ

Public TV
1 Min Read

ಕಾರವಾರ: ಭಟ್ಕಳದ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ದೇವಸ್ಥಾನಗಳಲ್ಲಿ ದೇವರಿಗೆ ಕಾಯಿ ಇಟ್ಟು ಆಣೆ ಪ್ರಮಾಣ ಮಾಡಿದ್ದಾರೆ.

ನಾನು ಹಿಂದುತ್ವದ ವಿರುದ್ಧವಿದ್ದರೆ ಸರ್ವನಾಶವಾಗಿ ಹೋಗಲಿ. ಇಲ್ಲವೇ ಯಾರು ನನ್ನ ವಿರುದ್ಧ ಹಿಂದೂ ವಿರೋಧಿ ಎಂದು ಹಬ್ಬಿಸುತ್ತಿದ್ದಾರೋ ಅವರು ಸರ್ವನಾಶವಾಗಲಿ. ನಾನು ಹಿಂದೂ ವಿರೋಧಿಯಲ್ಲ. ಕಸಾಯಿ ಖಾನೆ ಮಾಡಲು ಹೊರಟಿಲ್ಲ. ಇವೆಲ್ಲವನ್ನೂ ನನ್ನ ತೇಜೋವಧೆಗಾಗಿ ವಾಟ್ಸಪ್, ಫೇಸ್‍ಬುಕ್ ಅಲ್ಲದೇ ಸ್ಥಳೀಯ ಪತ್ರಿಕೆಗಳಲ್ಲೂ ಸುಳ್ಳು ಸುದ್ದಿ ಮಾಡಿ ನಾನೊಬ್ಬ ಹಿಂದೂ ವಿರೋಧಿ ಎಂದು ಬಿಂಬಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಯಾವತ್ತೂ ಹಿಂದೂ ವಿರೋಧಿಯಲ್ಲ, ನಾನು ಹಿಂದೂ ವಿರೋಧವಾಗಿ ಕೆಲಸ ಮಾಡಿದ್ದರೆ ಸರ್ವನಾಶವಾಗಿ ಹೋಗಲಿ, ಇಲ್ಲವೇ ಅವರು ಸರ್ವನಾಶವಾಗಬೇಕೆಂದು ಇಡಗುಂಜಿ ಗ್ರಾಮದ ನೀಲಗೋಡು ಯಕ್ಷ ಚೌಡೇಶ್ವರಿ ದೇವರಿಗೆ ತೆಂಗಿನ ಕಾಯಿಗಳನ್ನಿಟ್ಟು ಮಂಕಾಳು ವೈದ್ಯ ಪ್ರಮಾಣ ಮಾಡಿದ್ದಾರೆ.

ಪ್ರಚಾರಕ್ಕೆ ತೆರಳಿದ ಪ್ರತಿ ಗ್ರಾಮದ ಶಕ್ತಿ ದೇವರಿಗೆ ಕಾಯಿಗಳನ್ನಿಟ್ಟು ಮಂಕಾಳು ವೈದ್ಯ ಪ್ರಮಾಣ ಮಾಡುತ್ತಿರುವುದು ವಿಶೇಷ.

Share This Article
Leave a Comment

Leave a Reply

Your email address will not be published. Required fields are marked *