ಬಂದ್‍ಗೆ ಬೆಂಬಲಿಸಿ ಎಂದು ಬಿಎಸ್‍ವೈ ಫೋನ್ ಮಾಡ್ಲಿ, ಆವಾಗ ಉತ್ತರ ಕೊಡ್ತೀನಿ: ವಾಟಾಳ್ ನಾಗರಾಜ್

Public TV
1 Min Read

ಬೆಂಗಳೂರು: ಕರ್ನಾಟಕ ಬಂದ್‍ಗೆ ಹೇಗ್ರಿ ಕರೆ ಕೊಟ್ರಿ, ಬಂದ್‍ಗೆ ಬೆಂಬಲ ಸೂಚಿಸಿ ಅಂತಾ ನಂಗೆ ಫೋನ್ ಮಾಡ್ಲಿ ಸರಿಯಾಗಿ ಉತ್ತರ ಕೊಡ್ತೀನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಾಜ್ ಗುಡುಗಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಂದ್‍ಗೆ ಕರೆ ನೀಡಿದಾಗ ಬಿಎಸ್‍ವೈ ಬೆಂಬಲಿಸಲಿಲ್ಲ. ನನ್ನ ಬಗ್ಗೆ ಅಪಪ್ರಚಾರ ಮಾಡಿ, ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಮಹದಾಯಿ ಹೋರಾಟಕ್ಕೆ ಬೆಂಬಲ ನೀಡಿಲ್ಲ, ಹೀಗಾಗಿ ಅವರು ಹಸಿರು ಶಾಲ್ ಹಾಕಿಕೊಳ್ಳಬಾರದು ಎಂದು ವಾಟಾಳ್ ಒತ್ತಾಯಿಸಿದ್ದಾರೆ.

ಈ ಹಿಂದೆ ಯಡಿಯೂರಪ್ಪವರು ಮಾಜಿ ಸಿಎಂ ಸಿದ್ದರಾಮಯ್ಯರನ್ನ ಜೈಲಿಗೆ ಕಳುಹಿಸುತ್ತೇನೆ ಅಂದಿದ್ದರು. ಆದರೆ ಈಗ ಅವರನ್ನು ಮೆಚ್ಚಿಸಲು ಮುಂದಾಗುತ್ತಿದ್ದಾರೆ. ಬಿಜೆಪಿ ಕರೆಕೊಟ್ಟಿರುವ ಕರ್ನಾಟಕ ಬಂದ್‍ಗೆ ನಾವು ಬೆಂಬಲ ನೀಡುವುದಿಲ್ಲ. ಯಡಿಯೂರಪ್ಪಗಿಂತ ನಮಗೆ ರೈತರ ಬಗ್ಗೆ ಹೆಚ್ಚು ಕಾಳಜಿಯಿದೆ ಎಂದು ಅವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *