ನೂರು ಜನ್ರು ಗೋ-ಬ್ಯಾಕ್ ಅಂದ್ರೆ, ಅದಕ್ಕಿಂತ ಜಾಸ್ತಿ ಕಮ್ ಬ್ಯಾಕ್ ಅನ್ನೋರು ಇರ‍್ತಾರೆ: ಡಿಕೆಶಿ

1 Min Read

ದಾವಣಗೆರೆ: ನೂರು ಜನ್ರು ಗೋ-ಬ್ಯಾಕ್ ಅಂದ್ರೆ, ಅದಕ್ಕಿಂತ ಜಾಸ್ತಿ ಕಮ್ ಬ್ಯಾಕ್ ಅನ್ನೋರು ಇರ‍್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ನಡೆದ ಸೇವಲಾಲ್ ಜಯಂತಿಯ ವೇದಿಕೆಯಲ್ಲಿ ಮಾತನಾಡಿ, ನಮ್ಮ ಸರ್ಕಾರ ಸಾವಿರ ದಿನ ಪೂರೈಸಿದ ದಿನವೇ ನಾನು ಸಂತಾ ಸೇವಾಲಾಲ್ ಜಯಂತೋತ್ಸವದಲ್ಲಿ ಭಾಗಿಯಾಗಿದ್ದು ನನ್ನ ಪುಣ್ಯ. ಸಾಕಷ್ಟು ಜನರು ಪ್ರೀತಿಯಿಂದ ಗೋ ಬ್ಯಾಕ್, ಗೋ ಬ್ಯಾಕ್ ಎಂದು ಹೇಳಿದ್ದಾರೆ. ನೀವು ಎಷ್ಟೇ ಗೋ ಬ್ಯಾಕ್ ಎಂದರೂ ವೆಲ್ಕಂ, ಕಮ್ ಬ್ಯಾಕ್ ಅನ್ನೋರೇ ಇಲ್ಲಿ ಜಾಸ್ತಿ ಇದಾರೆ. ನಿಮ್ಮ ಸಮಾಜಕ್ಕೆ ಅನ್ಯಾಯ ಆದಾಗ ಡಿಕೆಶಿ ಒಬ್ಬರೇ ನಿಮ್ಮಪರವಾಗಿ ನಿಂತು ಹೋರಾಟ ಮಾಡಿದವನು. ರಾಜಕೀಯದಲ್ಲಿ ಧರ್ಮ ಇರಬೇಕೇ ಹೊರೆತು ಧರ್ಮದಲ್ಲಿ ರಾಜಕೀಯ ಇರಬಾರದು ಎಂದರು. ಇದನ್ನೂ ಓದಿ: ಮ್ಯಾಚ್‌ನಲ್ಲಿ ಪಾಕ್‌ ಆಟಗಾರರ ಜೊತೆ ಹ್ಯಾಂಡ್‌ಶೇಕ್‌ ಮಾಡ್ತೀರಾ?- ಪ್ರಶ್ನೆಗೆ ಸೂರ್ಯಕುಮಾರ್‌ ಹೇಳಿದ್ದೇನು?

ವೇದಿಕೆ ಮೇಲೆ ಇರುವ ರಾಜೀವ್, ರೇಣುಕಾಚಾರ್ಯ, ಬಿವೈ ರಾಘವೇಂದ್ರ ನನ್ನನ್ನು ಕಮ್ ಬ್ಯಾಕ್ ಕಮ್ ಬ್ಯಾಕ್ ಎನ್ನುತ್ತಿದ್ದಾರೆ. ನನ್ನ ವಿರುದ್ಧ ನೂರು ಜನ ಕಿರುಚಾಡಬಹುದು ಅಂತವರಿಗೆ ಈ ಡಿಕೆಶಿ ಜಗ್ಗೋ ಮಗ ನಾನಲ್ಲ. ಡಿಕೆಶಿ ಮಾತ್ರ ನಿಮ್ಮ ಪರವಾಗಿ ನಿಂತು ಹೋರಾಟ ಮಾಡಿದವನು. ಅಂಬೇಡ್ಕರ್ ಹೇಳಿದಂತೆ ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾಡೋದು ಬಿಡಬೇಕು. ನೀವ್ಯಾರೋ ಗೋ ಬ್ಯಾಕ್ ಅಂದ್ರು ಜಗ್ಗೋ ಮಗ ನಾನಲ್ಲ. ರಾಜಕೀಯವನ್ನು ಚುನಾವಣೆ ಸಂದರ್ಭದಲ್ಲಿ ಮಾಡೋಣ. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾಡೋದು ತಪ್ಪು ಎಂದು ತಿಳಿಸಿದರು.

Share This Article