ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು: ಸಚಿವ ಡಿ.ಸಿ.ತಮ್ಮಣ್ಣ

Public TV
2 Min Read

ಮಂಡ್ಯ: ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು ಎಂದು ಮಂಡ್ಯದ ಮದ್ದೂರಿನಲ್ಲಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಸುಮಲತಾರನ್ನೇ ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ನನಗಿತ್ತು. ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿಸುವ ಯತ್ನ ಮಾಡಿದ್ದೆ. ಆದರೆ ಸಂಬಂಧಿ ಮಧು ಮೂಲಕ ಮಾಡಿದ ಪ್ರಯತ್ನ ವಿಫಲವಾಯ್ತು ಎಂದು ಹೇಳಿದ್ದಾರೆ.

ಮಧು ಎಂಬವರು ಸಚಿವ ತಮ್ಮಣ್ಣ ಮತ್ತು ಅಂಬಿ ಕುಟುಂಬದ ಸಂಬಂಧಿ. ಸಂಧಾನಕ್ಕೆ ನಾನು, ನನ್ನ ಮಗ ಸಕಲ ಪ್ರಯತ್ನ ಮಾಡಿದ್ದೇವು. ಸಂಧಾನಕ್ಕೆ ಸುಮಲತಾ ಅವರೇ ಒಪ್ಪಲಿಲ್ಲ. ಎಚ್.ಡಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುಡುವೆ ಏನು ನಡೆದಿದೆಯೋ ನನಗೆ ಗೊತ್ತಿಲ್ಲ. ಹೀಗಾಗಿ ಕುಮಾರಸ್ವಾಮಿ ಮೇಲೆ ಒತ್ತಡ ಹೇರಲಿಲ್ಲ. ಸುಮಲತಾ ಅವರು ಕುಮಾರಸ್ವಾಮಿಯನ್ನು ಭೇಟಿಯಾಗಿ ನಾನೇ ಅಭ್ಯರ್ಥಿ ಆಗ್ತೀನಿ ಟಿಕೆಟ್ ಕೊಡಿ ಎಂದು ಸುಮಲತಾ ಕೇಳಬೇಕಿತ್ತು. ಆದರೆ ಭೇಟಿಯಾಗೋಕೆ ಅವರೇ ಒಪ್ಪಲಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಅಂಬರೀಶ್ ಅವರ ಅಣ್ಣನ ಮಗ ಮಧು ಮೂಲಕ ನಾನು ಹಾಗೂ ನನ್ನ ಮಗ ಸುಮಲತಾ ಬಳಿ ಮಾತನಾಡಿದ್ದೇನೆ. ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾಗಲೇ ನಾವು ಕೇಳಿದ್ದೇವೆ. ಅಂಬರೀಶ್ ಹಾಗೂ ಕುಮಾರಸ್ವಾಮಿ ಇಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರ ನಡುವೆ ಒಳ್ಳೆಯ ಸಂಬಂಧ ಬೆಳೆಯಲಿ ಎಂದು ಇಬ್ಬರು ಕುಳಿತು ಸ್ಪರ್ಧೆ ಬಗ್ಗೆ ಮಾತನಾಡಲಿ ಎಂದು ಈ ರೀತಿ ಮಾಡಿದ್ದೆ ಎಂದರು.

ಸುಮಲತಾ ಅವರು ನಮ್ಮ ಮನವಿಯನ್ನು ಏಕೆ ತಿರಸ್ಕರಿಸಿದರು ಎಂಬುವುದು ಗೊತ್ತಿಲ್ಲ. ಅವರು ಈ ವಿಷಯದ ಬಗ್ಗೆ ಒಲವು ತೋರಿಸದ ಕಾರಣ ಒತ್ತಾಯಿಸಲಿಲ್ಲ. ನಾನು ಸುಮಲತಾ ಅವರ ಜೊತೆ ನೇರವಾಗಿ ಮಾತನಾಡಿಲ್ಲ. ಮಧು ಮೂಲಕ ನಾವು ಈ ವಿಷಯದ ಬಗ್ಗೆ ಮಾತನಾಡಿದ್ದೇವೆ. ದೇವೇಗೌಡರು ಹಾಗೂ ಸುಮಲತಾ ಅವರು ನಮಗೆ ಸಂಬಂಧಿಕರೇ. ಸುಮಲತಾ ಅವರು ಈ ಬಗ್ಗೆ ಒಲವು ತೋರಿಸಿದ್ದರೆ, ನಾವು ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹಾಕುತ್ತಿದ್ದೇವು ಎಂದು ತಮ್ಮಣ್ಣ ಸ್ಪಷ್ಟಪಡಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *