ಚಿರು ಮಗನನ್ನು ನಾನೇ ಲಾಂಚ್ ಮಾಡುತ್ತೇನೆ : ಅರ್ಜುನ್ ಸರ್ಜಾ

Public TV
1 Min Read

ನ್ನಡದ ಹೆಸರಾಂತ ನಟ ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ ಎರಡು ವರ್ಷ. ಚಿರು ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ಇಂದು ಧ್ರುವ ಫಾರ್ಮ್ ಹೌಸ್‌ನಲ್ಲಿರುವ ಚಿರು ಸಮಾಧಿಗೆ ಪೂಜೆ ಸಲ್ಲಿಸಿ, ಎರಡನೇ ವರ್ಷದ ಕಾರ್ಯ ಮುಗಿಸಿದರು. ಕನಕಪುರ ರಸ್ತೆಯಲ್ಲಿರುವ ನೆಲಗೂಳಿಯಲ್ಲಿರೋ ಫಾರ್ಮ್ ಹೌಸ್‌ಗೆ ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಮೇಘನಾ ರಾಜ್, ಸುಂದರ್ ರಾಜ್, ಚಿರು ಪುತ್ರ ರಾಯನ್ ಸೇರಿದಂತೆ ಕುಟುಂಬದ ಹಲವು ಸದಸ್ಯರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅರ್ಜುನ್ ಸರ್ಜಾ, ‘ ಚಿರು ಕಳೆದುಕೊಂಡು ಹೇಗೆ ಎರಡು ವರ್ಷ ಆಯ್ತು ಅಂತ ಗೊತ್ತಾಗ್ತಿಲ್ಲ. ಅವನು ಇಲ್ಲ ಅನ್ನುವ ಬಗ್ಗೆ ಏನು ಹೇಳ್ಬೇಕು ಅಂತಾನೂ ಗೊತ್ತಿಲ್ಲ. ಚಿರುನ ಎತ್ತಿ ಆಡಿಸಿದ್ದೆ, ಸ್ಕೂಲಿಗೆ ಕಳಿಸಿದ್ದೆ. ಆ್ಯಕ್ಟಿಂಗ್ ಕ್ಲಾಸ್‌ಗೆ ಕಳಿಸಿದ ನೆನಪು ಇನ್ನೂ ಹಾಗೆಯೇ ಇವೆ. ನನ್ನ ಅಣ್ಣನೇ ಚಿರು ಸಿನಿಮಾ ನಿರ್ದೇಶನ ಮಾಡಿದ್ದು, ನಾನು ಆ ಸಿನಿಮಾ ನಿರ್ಮಾಣ ಮಾಡಿ ವಾಯುಪುತ್ರ ಮೂಲಕ ಲಾಂಚ್ ಮಾಡಿದ್ವಿ. ಚಿರು ಅಗಲಿಕೆ ಮಾಸದ ಗಾಯ’ ಎಂದರು. ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

ಚಿರು ಮಗನ ಕುರಿತಾಗಿ ಮಾತನಾಡುತ್ತಾ, “ಚಿರು ಮಗ ನಮಗೆ ನೆಮ್ಮದಿ ಕೊಡುತ್ತಿದ್ದಾನೆ. ಅವನು ಇಲ್ಲ ಅನ್ನುವ ಕೊರಗು ಸ್ವಲ್ಪ ಕಡಿಮೆ ಮಾಡಿದ್ದಾನೆ. ಚಿರುನನ್ನು ನಾವೇ ಲಾಂಚ್ ಮಾಡಿದ್ದೇವೆ. ಅವನ ಮಗನನ್ನು ನಾನೇ ಲಾಂಚ್ ಮಾಡುತ್ತೇನೆ’ ಎಂದು ಭಾವುಕರಾಗಿ ನುಡಿದರು.

Share This Article
Leave a Comment

Leave a Reply

Your email address will not be published. Required fields are marked *