ಆ್ಯಸಿಡ್ ಹಾಕಿರೋ ಯುವತಿಗೆ ನಾನೇ ಲೈಫ್ ಕೊಡ್ತೀನಿ, ಕ್ಷಮಿಸಿ ನಾನೊಬ್ಬ ಪಾಪಿ: ಆ್ಯಸಿಡ್ ನಾಗ

Public TV
2 Min Read

– ಗುಂಡೇಟು ತಿಂದು ಮಲಗಿದ್ದ ಆಸಿಡ್ ನಾಗನ ಸಾರಿ ಕಹಾನಿ.
– ಪೊಲೀಸ್ ಕಸ್ಟಡಿಯಲ್ಲಿ ಕೂತ ನಾಗೇಶ ಏನ್ ಹೇಳ್ದಾ ಗೊತ್ತಾ..?

ಬೆಂಗಳೂರು: ನಾನು ದೊಡ್ಡ ತಪ್ಪು ಮಾಡಿದೆ, ಆ್ಯಸಿಡ್ ಹಾಕಬಾರದಿತ್ತು. ಕನಸು-ಮನಸಲ್ಲೂ ಯೋಚನೆ ಮಾಡದ್ದನ್ನು ಮಾಡಿದೆ. ಕ್ಷಮಿಸಿ ನಾನೊಬ್ಬ ಪಾಪಿ ಎಂದು ಪೊಲೀಸರ ಮುಂದೆ ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ್ದಾನೆ.

ನಗರದಲ್ಲಿ ಯುವತಿ ಮೇಲೆ ಆ್ಯಸಿಡ್ ಎರಚಿ ಕಾಮಾಕ್ಷಿಪಾಳ್ಯ ಪೊಲೀಸರ ಬಂಧನದಲ್ಲಿರುವ ಆರೋಪಿ ಆ್ಯಸಿಡ್ ನಾಗ ವಿಚಾರಣೆ ವೇಳೆ ದೊಡ್ಡ ಹೈಡ್ರಾಮಾ ಮಾಡಿದ್ದಾನೆ. ಆ್ಯಸಿಡ್ ಹಾಕುವ ಮನಸ್ಸು ನನಗಿರಲಿಲ್ಲ. ನಾನು ಪ್ರೀತಿಸಿದ ಹುಡುಗಿ ಬೇರೆ ಯಾರಿಗೂ ಸಿಗಬಾರದು ಅಂತ ಹೀಗೆ ಮಾಡಿದೆ. ಆದರೆ ಈಗ ಆ್ಯಸಿಡ್ ಹಾಕಿ ಪ್ರತಿಕ್ಷಣ ಸತ್ತು ಬದುಕುತ್ತಿದ್ದೇನೆ. ನಾನು ಯುವತಿ ಕಾಲೇಜಿನಲ್ಲಿದ್ದಾಗಲೇ ಲವ್ ಮಾಡಿದ್ದೆ. ಕಾಲೇಜಿನಲ್ಲೂ ಕೂಡ ಯುವತಿಯನ್ನು ಫಾಲೋ ಮಾಡುತ್ತಿದ್ದೆ. ಯಾರಾದರೂ ನನ್ನ ಹುಡುಗಿ ಮೇಲೆ ಕಣ್ಣು ಹಾಕಿದರೆ ವಾರ್ನಿಂಗ್ ಕೊಡುತ್ತಿದ್ದೆ. ಒನ್ ಸೈಡ್ ಲವ್ ಅಂತ ಗೊತ್ತಾಗುತ್ತಿದ್ದಂತೆ ಹುಚ್ಚನಾಗಿಬಿಟ್ಟಿದ್ದೆ. ಅವಳಿಲ್ಲದೇ ಒಂದು ಸೆಕೆಂಡ್ ಕೂಡ ಇರುವುದಕ್ಕೆ ಆಗುತ್ತಿರಲಿಲ್ಲ ಎಂದಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ತಲ್ವಾರ್‌ನಲ್ಲಿ ಕೇಕ್ ಕಟ್ – ಮೂವರ ಬಂಧನ

ನನ್ನನ್ನು ಆಕೆ ಇಷ್ಟ ಪಡುತ್ತಿಲ್ಲ ಎಂದ ಕೂಡಲೇ ಕುಡಿತವೇ ಜೀವನವಾಯಿತು. ನಾನು ತಪ್ಪು ಮಾಡಿದೆ. ದೇವರು ಅದಕ್ಕೆ ನಿಮ್ಮ ಕೈಯಿಂದ ಶಿಕ್ಷೆ ಕೊಡಿಸಿಬಿಟ್ಟ. ಗುಂಡು ಹಾರಿಸಿ ಒಳ್ಳೆಯ ಕೆಲಸವನ್ನೇ ಮಾಡಿದ್ದೀರಾ. ನನಗೆ ಕಾಲು ಮುರಿದಿರುವುದು ಸಣ್ಣ ಶಿಕ್ಷೆಯೇ, ನನ್ನನ್ನು ಗಲ್ಲಿಗೇರಿಸುವುದೇ ಅಂತಿಮ. ನನ್ನ ಕಾಲಿಗೆ ಗುಂಡು ಹಾರಿಸುವ ಬದಲು ನನ್ನ ಎದೆಗೆ ಗುಂಡು ಹಾರಿಸಿದ್ದರೆ ಒಳ್ಳೆಯದಾಗುತ್ತಿತ್ತು. ದಯವಿಟ್ಟು ನನಗೆ ಸರಿಯಾದ ಶಿಕ್ಷೆ ಸಿಗುವ ಹಾಗೇ ಮಾಡಿ. ಮುಂದಿನ ದಿನದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿರುತ್ತೇನೆ ಎಂದು ಹೇಳಿದ್ದಾನೆ.

ನಾನು ಆ್ಯಸಿಡ್ ಹಾಕಿರುವ ಹುಡುಗಿಗೆ ನಾನೇ ಲೈಫ್ ಕೊಡುತ್ತೇನೆ. ಆದರೆ ಆ ಯುವತಿ ಹಾಗೂ ಅವರ ಮನೆಯವರು ಒಪ್ಪಬೇಕು. ಆಕೆಯನ್ನು ಮದುವೆಯಾಗುವ ಅರ್ಹತೇನೂ ನನಗಿಲ್ಲ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ದೇವಸ್ಥಾನದಲ್ಲಿ ಮದುವೆಯಾಗಲು ಬಿಡಲ್ಲ – ಗುಜರಾತ್ ಯುವತಿ ವಿರುದ್ಧ ಸಿಡಿದ ಬಿಜೆಪಿ ನಾಯಕಿ 

Share This Article
Leave a Comment

Leave a Reply

Your email address will not be published. Required fields are marked *