ಹಣೆಬರಹದಲ್ಲಿ ಎಲ್ಲಿ ಬರೆದಿದ್ಯೋ ಅಲ್ಲಿಂದ ಮುಂದಿನ ಚುನಾವಣೆಗೆ ಸ್ಪರ್ಧೆ – ನಿಖಿಲ್ ಕುಮಾರಸ್ವಾಮಿ

2 Min Read

-ದೇವೇಗೌಡರನ್ನ ರಾಜ್ಯಸಭೆಗೆ ಮರು ಆಯ್ಕೆ, ಕೇಂದ್ರ ಬಿಜೆಪಿ ನಾಯಕರ ನಿರ್ಧಾರಕ್ಕೆ ನಮ್ಮ ಒಪ್ಪಿಗೆ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅಂತ ಚುನಾವಣೆ ಸಮಯ ಬಂದಾಗ ನಿರ್ಧಾರ ಆಗಲಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಜನ ಎಲ್ಲಾ ಕಡೆ ನಮ್ಮನ್ನೇ ಪ್ರೀತಿಸ್ತಾರೆ. ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ನನ್ನನ್ನು ಕರೆಯುತ್ತಾರೆ. ಹಾಗಾಗಿ ನಾನು ಎಲ್ಲಾ ಕಡೆ ಹೋಗಬೇಕಾಗುತ್ತೆ. ಇದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ. 2028ಕ್ಕೆ ಗಡಿಯನ್ನು ದಾಟಬೇಕು. ಸದನದಲ್ಲೂ ನಮ್ಮ ಸಂಖ್ಯೆ ನೋಡಿ ಅಪಹಾಸ್ಯ ಮಾಡಿದ್ದಾರೆ. ಹಾಗಾಗಿ ಪಕ್ಷ ಕಟ್ಟಿ ತೋರಿಸ್ತೀವಿ. NDA ಸರ್ಕಾರ ರಚನೆ ಮಾಡ್ತೀವಿ. ಎಲ್ಲಿ ಸ್ಪರ್ಧೆ ಎನ್ನುವುದು ಮುಂದೆ ತೀರ್ಮಾನ ಮಾಡೋಣ. ನಮ್ಮ ಉದ್ದೇಶ ನಮ್ಮ ಗುರಿ ಈಡೇರಿಕೆ ಆಗಬೇಕು. ಜೆಡಿಎಸ್ ಎಲ್ಲಿದೆ ಅಂತಾರೆ. ವಿಧಾನಸಭೆಯಲ್ಲಿ ಹೇಗೆ ಚರ್ಚೆ ಆಗುತ್ತೆ ನೋಡಿದ್ದೇವೆ. ಪಕ್ಷ ಕಟ್ಟಿ ತೋರಿಸ್ತೇವೆ. ನಮ್ಮ ಗುರಿ ಮೈತ್ರಿ ಅಧಿಕಾರಕ್ಕೆ ಬರಬೇಕು. ನನ್ನ ಸ್ಪರ್ಧೆ ಯಾವ ಕ್ಷೇತ್ರ ಅಂತ ಚುನಾವಣೆ ಸಮಯದಲ್ಲಿ ನಿರ್ಧಾರ ಮಾಡೋಣ. ನಮ್ಮ ಹಣೆಬರಹ ಎಲ್ಲಿದೆ ಅಂತ ನೋಡೋಣ ಎಂದಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ಪ್ರಚಾರಕ್ಕೆ ನಕಾರ – ಸಚಿವ ಜಮೀರ್ ಅಹ್ಮದ್ ಸೇರಿ ಮೂವರ ವಿರುದ್ಧ ಹೈಕಮಾಂಡ್‌ಗೆ ದೂರು

ಇನ್ನು ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಬರಬೇಕು ಅಂತ ಇದೆ. ಕುಮಾರಸ್ವಾಮಿ ನಾಯಕತ್ವದ ಮೇಲೆ ಜೆಡಿಎಸ್ ಮತ ಕೇಳೋದು. ಮುಖಂಡರು, ಜನರು ಕೂಡಾ ಕುಮಾರಸ್ವಾಮಿ ಅವರು ಬರಬೇಕು ಅಂತ ಹೇಳ್ತಾ ಇದ್ದಾರೆ. ಕಾಂಗ್ರೆಸ್ ಆಡಳಿತ ನೋಡಿ ಕುಮಾರಸ್ವಾಮಿ ಆಡಳಿತ ಸ್ಮರಣೆ ಮಾಡ್ತಾ ಇದ್ದಾರೆ. ಅವರು ಸಿಎಂ ಆದರೆ ಅಭಿವೃದ್ಧಿ ಆಗುತ್ತೆ ಅಂತ ಜನರ ಭಾವನೆ ಇದೆ. ಆದರೆ ನಾವು ಮೈತ್ರಿಯಲ್ಲಿ ಇದ್ದೇವೆ. ಕೇಂದ್ರದ ನಾಯಕರು ಈ ಬಗ್ಗೆ ತೀರ್ಮಾನ ಮಾಡ್ತಾರೆ. ಕುಮಾರಸ್ವಾಮಿ ನಾಯಕತ್ವದ ಬಗ್ಗೆ ಕೇಂದ್ರದ ನಾಯಕರಿಗೂ ಗೊತ್ತಿದೆ ಎಂದು ತಿಳಿಸಿದ್ದಾರೆ.

ಆಂಧ್ರದ ಸಿಎಂ ಮಗ ಕುಮಾರಸ್ವಾಮಿ ಅವರ ಬಗ್ಗೆ ಮಾತಾಡಿದ್ದು ನೋಡಿದ್ದೇವೆ. ಕುಮಾರಸ್ವಾಮಿ ಯಾವುದೇ ಕೆಲಸ, ಸಿಎಂ ಕೆಲಸ ಕೊಟ್ಟರೂ ಮಾಡ್ತಾರೆ. ಅವರಿಗೆ ಕೊಟ್ಟ ಕೆಲಸ ಹೇಗೆ ಮಾಡ್ತಾರೆ, ಅವರ ಆಡಳಿತ ಹೇಗೆ ಅಂತ ಅಧಿಕಾರ ಇದ್ದಾಗ ತೋರಿಸಿದ್ದಾರೆ. ಮುಂದೆ ಬಿಜೆಪಿ ಕೇಂದ್ರ ನಾಯಕರು ಏನು ನಿರ್ಧಾರ ಮಾಡ್ತಾರೆ ನೋಡೋಣ. ಮೈತ್ರಿಯಲ್ಲಿ ನಾವು ಇದ್ದೇವೆ ಅಂತ ಪರೋಕ್ಷವಾಗಿ ಕುಮಾರಸ್ವಾಮಿ ಸಿಎಂ ಆಗೋ ಆಸೆ ಹೊರಹಾಕಿದ್ದಾರೆ.

ಇನ್ನೂ ಇದೇ ವೇಳೆ ದೇವೇಗೌಡರು ರಾಜ್ಯಸಭೆಗೆ ಮರು ಆಯ್ಕೆ ಆಗಬೇಕು ಅಂತ ನಮ್ಮ ಕಡೆಯಿಂದ ಚರ್ಚೆ ಆಗಿಲ್ಲ. ಆದರೆ ದೇವೇಗೌಡರು ಮತ್ತೆ ಹೋಗಬೇಕು ಅಂತ ಪಕ್ಷಾತೀತವಾಗಿ ಚರ್ಚೆ ಆಗ್ತಿದೆ. ನೀರಾವರಿ ವಿಚಾರ, ತಂಬಾಕು ಸಮಸ್ಯೆ ಸೇರಿದಂತೆ ಹಲವು ಸಮಸ್ಯೆ ಬಗ್ಗೆ ದೇವೇಗೌಡರ ಮಾತಿಗೆ ಕೇಂದ್ರ ಮನ್ನಣೆ ಕೊಟ್ಟಿದೆ. ಮೋದಿ ಅವರು ದೇವೇಗೌಡರಿಗೆ ಗೌರವ ಕೊಟ್ಟರು. ಈ ಹೋರಾಟ ನೋಡಿ ದೇವೇಗೌಡರ ಧ್ವನಿ ಇನ್ನು ರಾರಾಜಿಸಬೇಕು ಅಂತ ಪಕ್ಷಾತೀತವಾಗಿ ಇದೆ ಎಂದು ಹೇಳಿದ್ದಾರೆ.

ನಾವು ಯಾವುದೇ ಬೇಡಿಕೆ ಇಟ್ಟು ನಾವು ಮೈತ್ರಿ ಮಾಡಿಕೊಂಡಿಲ್ಲ. ಮೋದಿ, ಅಮಿತ್, ಕೇಂದ್ರದ ನಾಯಕರು ಏನು ನಿರ್ಧಾರ ಮಾಡ್ತಾರೋ ಅದಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: 1ನೇ ತರಗತಿ ದಾಖಲಾತಿಗೆ 60 ದಿನಗಳ ವಿನಾಯಿತಿ – ರಾಜ್ಯ ಸರ್ಕಾರ ಅಧಿಕೃತ ಆದೇಶ

Share This Article