ಸಿಎಂ ಎಲೆಕ್ಷನ್ ವೇಳೆ ಕಾರ್ ಟೈರ್‍ನಲ್ಲಿ ಸಾಗಿಸಿದ್ರಂತೆ ಕಂತೆ ಕಂತೆ ನೋಟು- ಜಿಪಂ ಸದಸ್ಯನಿಂದ ಹೊಸ ಬಾಂಬ್

Public TV
1 Min Read

ತುಮಕೂರು: ಜಿಲ್ಲೆಯ ಹೊನವಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯ ಜಿ.ನಾರಾಯಣ ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದಾಗ ನಡೆದಂತಹ ಉಪಚುನಾಚಣೆಯಲ್ಲಿ ನಾನೇ ಸ್ವತಃ ದುಡ್ಡು ಹಂಚಿದ್ದೇನೆ. ನನ್ನಲ್ಲಿದ್ದ ಸ್ಯಾಂಟ್ರೋ ಕಾರಿನ ಟೈರ್‍ನಲ್ಲಿ 4 ಲಕ್ಷ ರೂ. ತೆಗೆದುಕೊಂಡು ಹೋಗಿ ಹಂಚಿದ್ದೇನೆ ಎಂದು ಸೋಮವಾರದಂದು ತಿಪಟೂರಿನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯನವರು ಸಿಎಂ ಆಗಬೇಕು ಎಂಬ ಕನಸು ಕಂಡಿದ್ದೆ. ಈಗ ಅವರು ಪ್ರಧಾನಿಯೂ ಆಗಬೇಕು ಎಂಬ ಹಂಬಲ ಇದೆ. ಆದರೆ ಸಿದ್ದರಾಮಯ್ಯಗೋಸ್ಕರ ದುಡಿದ ನನಗೆ ಕಾಂಗ್ರೆಸ್ ನವರೇ ದ್ವೇಷ ಮಾಡ್ತಾ ಇದ್ದಾರೆ ಎಂದು ನೋವನ್ನು ತೋಡಿಕೊಂಡರು. ಅಲ್ಲದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಿಪಟೂರು ಕ್ಷೇತ್ರದಿಂದಲೇ ಸ್ಪರ್ಧಿಸಿ ವಿಧಾನಸೌಧ ಪ್ರವೇಶಿಸುತ್ತೇನೆ ಅಂದ್ರು.

ಇದು ಸೂರ್ಯ ಚಂದ್ರರಿರುವಷ್ಟೇ ಸತ್ಯ ಎಂದು ಆಕ್ರೋಶಭರಿತರಾಗಿ ಹೇಳಿ ಇನ್ನೊಂದು ವಿವಾದ ಸೃಷ್ಟಿಸಿದ್ದಾರೆ. ವೇದಿಕೆಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ಇದ್ದರೂ ಜಿ.ನಾರಾಯಣ ಈ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *