ನಾನು ಬದುಕಲು ಅರ್ಹನಲ್ಲ- ಮಂಡ್ಯದ ರೇಪ್ ಆರೋಪಿಗೆ ಈಗ ಪಶ್ಚಾತ್ತಾಪ

Public TV
1 Min Read

ಮಂಡ್ಯ: ಟ್ಯೂಷನ್‍ (Tution) ಗೆ ಹೋಗಿದ್ದ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕೀಚಕನಿಗೆ ಇದೀಗ ತಾನು ಮಾಡಿರುವ ತಪ್ಪಿನ ಪಶ್ಚಾತ್ತಾಪವಾಗುತ್ತಿದೆ. ಪೊಲೀಸರ ಮುಂದೆ ನಾನು ಬದುಕಲ್ಲ, ಸತ್ತು ಹೋಗುತ್ತೇನೆ ಎಂದು ಆ ಕಡುಪಾಪಿ ಹೇಳುತ್ತಾ ಇದ್ದಾನೆ.

jail

ಅಕ್ಟೋಬರ್ 11 ರಂದು ಮಂಡ್ಯ (Mandya) ಜಿಲ್ಲೆಯಲ್ಲಿ ಟ್ಯೂಷನ್‍ಗೆ ಹೋಗಿದ್ದ 10 ವರ್ಷದ ಬಾಲಕಿಯ ಮೇಲೆ ಟ್ಯೂಷನ್‍ನ ಮೇಲ್ವಿಚಾರಕ ಕಾಂತರಾಜು (Kantharaju) ಎಂಬ ಕಾಮ ಪಿಶಾಚಿ ಲೈಂಗಿಕ ದೌರ್ಜನ್ಯವೆಸಗಿ ಅಮಾನುಷವಾಗಿ ಕೊಲೆ ಮಾಡಿದ್ದ. ಈ ಪ್ರಕರಣ ಜರುಗಿದ 24 ಗಂಟೆಯ ಒಳಗೆ ಕಾಂತರಾಜುನನ್ನು ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಮೆಕ್ಸಿಕೋದಲ್ಲಿ ಇಂಧನ ಟ್ಯಾಂಕರ್‌ಗೆ ರೈಲು ಡಿಕ್ಕಿ – ಸ್ಥಳೀಯ ಮನೆಗಳು ಬೆಂಕಿಗಾಹುತಿ

POLICE JEEP

ಕಾಂತರಾಜು ಎಸಗಿರುವ ಅಮಾನುಷ ಕೃತ್ಯವನ್ನು ಇಡೀ ಮಾನವ ಸಂಕುಲವೇ ಖಂಡಿಸಿತು. ಆತ ಎಸಗಿರುವ ಕೃತ್ಯ ಕ್ಷಮಿಸಲು ಆಗದಂತಹದ್ದು, ಆತನನ್ನು ಗಲ್ಲಿಗೆ ಏರಿಸಬೇಕು. ಪುಟ್ಟಕಂದಮ್ಮನ ಆತ್ಮಕ್ಕೆ ಶಾಂತಿ ದೊರಕಬೇಕೆಂದ್ರೆ ಇವನ್ನು ಜೀವಂತ ಬಿಡಬಾರದೆಂದು ಆಕ್ರೋಶ ವ್ಯಕ್ತವಾಗಿದ್ದವು. ಅಲ್ಲದೇ ಬಾಲಕಿಯ ತಂದೆ-ತಾಯಿ ಕೂಡ ಸರ್ಕಾರ ಕಠಿಣ ಶಿಕ್ಷೆ ನೀಡಬೇಕಂದು ಒತ್ತಾಯಿಸಿದ್ದರು.

ಇದೀಗ ಜೈಲಿನಲ್ಲಿರುವ ಕೀಚಕ ಕಾಂತರಾಜುವಿಗೆ ತಾನು ಮಾಡಿರುವ ಪಾಪ ಕೃತ್ಯದ ಪಶ್ಚಾತ್ತಾಪ ಕಾಡುತ್ತಿದೆ. ಪೊಲೀಸರ ಮುಂದೆ ಕಾಂತರಾಜು ಪಶ್ಚಾತ್ತಾಪ ಪಟ್ಟಿದ್ದು, ನನ್ನಿಂದ ತಪ್ಪಾಗಿದೆ ಸಮಾಜದಲ್ಲಿ ನಾನೆಂದಿಗೂ ತಲೆ ಎತ್ತಲು ಸಾಧ್ಯವಿಲ್ಲ. ನನ್ನ ಕುಟುಂಬದ ಸ್ಥಿತಿ ಏನಾಗಿದೆಯೋ ಗೊತ್ತಿಲ್ಲ, ನಾನು ಬದುಕಲು ಅರ್ಹನಲ್ಲ ಎಂದು ಕಟುಕ ಕಾಂತರಾಜು ಪೊಲೀಸರ ಮುಂದೆ ಪಶ್ಚಾತ್ತಾಪ ಪಟ್ಟಿದ್ದಾನೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *