ನಾನು ಉತ್ಸವ ಮಾಡೋಕೆ ಹೋಗಿಲ್ಲ- ಸಚಿವರು ಕಾಣೆಯಾಗಿದ್ದಾರೆ ಎಂದ ಕಾಂಗ್ರೆಸ್‌ಗೆ ಬಿ.ಸಿ ಪಾಟೀಲ್ ಟಾಂಗ್

Public TV
1 Min Read

ಧಾರವಾಡ: ನಾನು ಯಾವುದೇ ಶಿವಕುಮಾರ ಉತ್ಸವ, ಸಿದ್ದರಾಮೋತ್ಸವ ಮಾಡಲು ಹೋಗಿರಲಿಲ್ಲ. ಗ್ಲೋಬಲ್ ಸಮಿತಿ ಸಭೆಗೆ ಹೋಗಿದ್ದೆ. ಅಲ್ಲಿ ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳನ್ನು ಮಾಡಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿಕೆ ನೀಡಿದರು.

ಕೃಷಿ ಸಚಿವರು ಕಾಣೆಯಾಗಿದ್ದಾರೆ, ಅವರನ್ನು ಹುಡುಕಿಕೊಡಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದಕ್ಕೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ್, ಆರ್ಗಾನಿಕ್ ಬಯೋಫ್ಯಾಕ್ಟ್ಸ್‌ನಲ್ಲಿ ಗ್ಲೋಬಲ್ ಸಮಿತಿ ಸಭೆಗೆ ನಾನು ಹೋಗಿದ್ದೆ. ಸಭೆಗೆ ಹೋಗಿದ್ದರೂ ಅಧಿಕಾರಿಗಳೊಂದಿಗೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೆ. ಕಾಂಗ್ರೆಸ್‌ನವರಿಗೆ ಟೀಕೆ ಮಾಡುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಡಿಕೆಶಿ ಭೇಟಿಗೆ ಬಂದ ಮಧ್ಯಪ್ರದೇಶದ ಮಹಿಳೆ ಕಣ್ಣೀರು

ಕಾಂಗ್ರೆಸ್‌ನವರ ಹಾಗೆ ಉತ್ಸವ ಮಾಡಿಕೊಳ್ಳುತ್ತಾ ಹೋದರೆ ಜನ ಮೆಚ್ಚುವುದಿಲ್ಲ. ನಾವು ಜನಪರ ಕೆಲಸಗಳನ್ನು ಮಾಡಿ ಜನರ ಬಳಿ ಹೋಗುತ್ತೇವೆ. ಕಾಂಗ್ರೆಸ್‌ನವರ ಹಾಗೆ ಉತ್ಸವಗಳನ್ನು ನಾವು ಮಾಡುವುದಿಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಗಟ್ಟಿಯಾಯ್ತು ಡಿಕೆ, ಸಿದ್ದು ಜೋಡಿ- ಪರಸ್ಪರ ಟೋಪಿ ಹಾಕಿಕೊಂಡ ನಾಯಕರು

ನಮ್ಮ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ರೈತರಿಗೆ ಡೀಸೆಲ್ ಸಬ್ಸಿಡಿ, ವಿದ್ಯಾನಿಧಿ ಕೊಡುವ ಕೆಲಸ ಮಾಡಿದೆ. ಜನರು ಉತ್ಸವ ನೋಡಿ ಸಂತೋಷ ಪಡಬಹುದು, ಆದರೆ ಅವರು ಕೆಲಸ ಮಾಡುವವರ ಕೈ ಮಾತ್ರ ಹಿಡಿಯುತ್ತಾರೆ ಎಂದು ಬಿ.ಸಿ ಪಾಟೀಲ್ ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *