ನಿಮ್ಮನ್ನ ಬಿಟ್ಟು ಹೋಗ್ತಿದ್ದೀನಿ, Sorry ಪ್ಲೀಸ್ ಅಳ್ಬೇಡಿ: ಗಂಡನಿಗೆ ಪತ್ರ ಬರೆದು ಮಗುವಿನೊಂದಿಗೆ ಬೇರೊಬ್ಬನ ಜೊತೆ ಪರಾರಿ!

Public TV
1 Min Read

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಮಡದಿ ಒಂದು ಮಗುವಾದ ಬಳಿಕ ಪರ ಪುರುಷನ ವ್ಯಾಮೋಹಕ್ಕೆ ಬಿದ್ದು, ಗಂಡನಿಗೆ ಕೈಕೊಟ್ಟು ಓಡಿಹೋಗಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ, ಡಾಬಸ್‍ಪೇಟೆಯ ಟೀಚರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಐದು ವರ್ಷದ ಹಿಂದೆ ಮಂಡ್ಯ ಮೂಲದ ಶ್ರೀನಿವಾಸ್, ಚನ್ನರಾಯಪಟ್ಟಣದ ಜ್ಯೋತಿ ಎಂಬುವವರು ಪ್ರೀತಿಸಿ ಮದುವೆಯಾಗಿದ್ದರು.

ಬೆಂಗಳೂರಿನ ಪೀಣ್ಯಾದ ಗಾರ್ಮೆಂಟ್ಸ್ ನಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾಗ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಿದ್ದರು. ಪತಿ ಶ್ರೀನಿವಾಸ್ ತನ್ನ ಪತ್ನಿಯನ್ನು ಪ್ರತಿನಿತ್ಯ ತಾನೇ ಕೈಯಾರ ಅಡುಗೆ ಮಾಡಿ ಕೈತ್ತುತ್ತು ತಿನ್ನಿಸುತಿದ್ದರು. ಹೆಂಡತಿಯ ಕೈಕಾಲು ಒತ್ತೋದು, ಆಕೆಯ ಬಟ್ಟೆ ಒಗೆಯೊದು, ನಂತರ ತಾನೇ ಆಕೆಯ ತಲೆ ಬಾಚಿ ಶೃಂಗಾರ ಮಾಡಿ ಸ್ನೋ ಪೌಡರ್ ಹಾಕಿ ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡು ಬಡವನಾದ್ರು ಸುಖಃದಲ್ಲಿಯೇ ಪ್ರೀತಿಸುತಿದ್ದರು.

ಕಳೆದ ಇಪ್ಪತ್ತು ದಿನದ ಹಿಂದೆ ಚನ್ನರಾಯಪಟ್ಟಣದ ಪ್ಲವರ್ ಡೆಕೊರೇಟ್ ಕೆಲಸ ಮಾಡುವ ನಾಗರಾಜು, ಪತ್ನಿ ಜ್ಯೋತಿಯ ತಲೆಕೆಡಿಸಿ ನಾಪತ್ತೆಯಾಗಿದ್ದಾನೆ ಎಂದು ಪತಿ ಶ್ರೀನಿವಾಸ್ ಡಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮನೆಯಿಂದ ಹೋಗುವ ಮುನ್ನ ಪತ್ನಿ ಜ್ಯೋತಿ ಗಂಡನಿಗೆ ಕಡೆಯ ಬಾರಿ ಪ್ರೀತಿಯ ಲೆಟರ್ ಬರೆದಿದ್ದು, “ನಿಮ್ಮನ್ನ ಬಿಟ್ಟು ಹೋಗುತ್ತಿದ್ದೇನೆ Sorry ಪ್ಲೀಸ್ ಅಳ್ಬೇಡಿ” ಎಂದು ಬರೆದು ನಾಪತ್ತೆಯಾಗಿದ್ದಾಳೆ. ಅಲ್ಲದೆ ಮನೆಯಲ್ಲಿದ್ದ ಬಿಡಿಗಾಸು, ಒಡವೆ ಸೇರಿದಂತೆ ಅಡುಗೆ ಮಾಡಲು ತಂದಿದ್ದ ತರಕಾರಿ ಸಾಂಬಾರು ಪದಾರ್ಥಗಳನ್ನೆಲ್ಲ ಎತ್ತಿಕೊಂಡು ಹೋಗಿದ್ದಾಳೆ ಎಂದು ಪತಿ ಹೇಳಿದ್ದಾರೆ.

ಹೆಂಡತಿ ಹಾಗೂ ಮುದ್ದಾದ ನಾಲ್ಕು ವರ್ಷದ ಹೆಣ್ಣು ಮಗು ನೋಡದಿರುವ ಶ್ರೀನಿವಾಸ್ ಫೋಟೋ ಹಿಡಿದುಕೊಂಡು ಇಬ್ಬರ ಪತ್ತೆಗಾಗಿ ಬೀದಿಬೀದಿ ಸುತ್ತುತಿದ್ದಾರೆ. ಅಲ್ಲದೆ ಕ್ಯಾಮೆರಾ ಮುಂದೆ ಆಗಿದೆಲ್ಲ ಆಗಿದೆ ಪ್ಲೀಸ್ ಮನೆಗೆ ಬಾ ಎಂದು ಕಣ್ಣೀರಿಡುತ್ತಿದ್ದಾರೆ.

ಒಟ್ಟಾರೆ ನಿಮ್ಮನ್ನ ಬಿಟ್ ಹೋಗ್ತಿದ್ದೀನಿ. ಅಳ್ಬೇಡಿ. ಫ್ರೀ ಆದ್ರೆ ಫೋನ್ ಮಾಡಿ ಅಂತಾ ಲೆಟ್ರು ಬರೆದಿಟ್ಟ ಪ್ರೀತಿಯ ಮಡದಿ, ಪುಟ್ಟ ಮಗಳ ಜೊತೆ ನಾಪತ್ತೆಯಾಗಿದ್ದಾಳೆ. ಪ್ರೀತಿಯಿಂದ ನೋಡಿಕೊಳ್ಳುತಿದ್ದ ಆಧುನಿಕ ಮಜ್ನುಗೆ ಈ ಹೆಂಡತಿ ಮಾಡಿರೋದು ನಿಜಕ್ಕೂ ಈತನ ದುರಾದೃಷ್ಟವೇ ಸರಿ.

 

Share This Article
Leave a Comment

Leave a Reply

Your email address will not be published. Required fields are marked *