ಕ್ಷೇತ್ರದಲ್ಲಿ ನನ್ನ ನಾಯಕತ್ವವನ್ನ ತಿರಸ್ಕರಿಸಿರೋದನ್ನ ನಾನು ಒಪ್ಪಿಕೊಳ್ತೀನಿ: ಚಲುವರಾಯಸ್ವಾಮಿ

Public TV
1 Min Read

ಮಂಡ್ಯ: ಕ್ಷೇತ್ರದಲ್ಲಿ ಜನ ನನ್ನ ನಾಯಕತ್ವವನ್ನ ತಿರಸ್ಕರಿಸಿರೋದನ್ನ ನಾನು ಒಪ್ಪಿಕೊಳ್ಳುತ್ತೇನೆ. ಮತದಾರರ ತೀರ್ಪಿಗೆ ನಾನು ತಲೆ ಬಾಗುತ್ತೇನೆ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.

ಬೇರೆ ಕ್ಷೇತ್ರದವರ ಸೋಲಿಗೆ ಕಾರಣ ನನಗೆ ಗೊತ್ತಿಲ್ಲ. ಜಾತಿ ಆಧಾರದ ಮೇಲೆ ಈ ಬಾರಿ ರಾಜ್ಯದಲ್ಲಿ ಚುನಾವಣೆ ನಡೆದಿದೆ. ಜಿಲ್ಲೆಯ ಅಭಿವೃದ್ಧಿ ಮಾಡಲಿ ಅಂತ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆ ಮತ ಹಾಕಿದ್ದಾರೆ. ಆ ಭರವಸೆಯನ್ನ ಅವರು ಉಳಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ ಅವರು, ರಾಷ್ಟ್ರದ ಹಾಗೂ ಮುಂಬರುವ ಚುನಾವಣೆ ದೃಷ್ಟಿಯಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. 120 ಸೀಟು ಬರಲ್ಲ ಅಂತ ಕುಮಾರಸ್ವಾಮಿ ಅವರಿಗೆ ಗೊತ್ತಿತ್ತು. ಗೊತ್ತಿಲ್ಲದಿರುವಷ್ಟು ಅವರು ಮುಗ್ದರಲ್ಲ. ಕಾಂಗ್ರೆಸ್ ಮಂತ್ರಿಗಳ ಬಗ್ಗೆ ಜೆಡಿಎಸ್ ಎಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ. ಜಮೀರ್ ಮಂತ್ರಿ ಸ್ಥಾನದ ಬಗ್ಗೆ ಜೆಡಿಎಸ್ ಹಸ್ತಕ್ಷೇಪವಿರುವುದಿಲ್ಲ. ನಾವು ಹೇಳಿದ್ದೆ ನಡೆಯಬೇಕು ಅಂತ ಮೈತ್ರಿ ಬಗ್ಗೆ ಕುಮಾರಸ್ವಾಮಿ ಆಗಲಿ ದೇವೇಗೌಡರಾಗಲಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *