ತಮ್ಮನ ಜೊತೆ ಕ್ಷುಲ್ಲಕ ಜಗಳ: ಮನನೊಂದು ನೇಣಿಗೆ ಶರಣಾದ ಬಿಟೆಕ್ ವಿದ್ಯಾರ್ಥಿನಿ

Public TV
1 Min Read

ಹೈದರಾಬಾದ್: ಮನೆಯಲ್ಲಿ ತಮ್ಮನೊಂದಿಗೆ ನಡೆದ ಕ್ಷುಲ್ಲಕ ಜಗಳಕ್ಕೆ ಮನನೊಂದ ಯುವತಿ ಮನೆಯಲ್ಲೇ ಆತ್ಮಹತ್ಯಗೆ ಶರಣಾಗಿರುವ ಘಟನೆ ಸುರಾರಂ ಬಳಿ ನಡೆದಿದೆ.

ಚಂದ್ರಂ ಮತ್ತು ರೇಣುಕಾ ದಂಪತಿಯ ಮಗಳು ಮೌನಿಕಾ(21) ಆತ್ಮಹತ್ಯಗೆ ಶರಣಾದ ಯುವತಿ. ಮೌನಿಕಾ ಮಲ್ಲಾರೆಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಫೈನಲ್ ಇಯರ್ ಓದುತ್ತಿದ್ದಳು.

ಬುಧವಾರ ಮಧ್ಯಾಹ್ನ 3 ಗಂಟೆಗೆ ತಮ್ಮನ ಜೊತೆ ಜಗಳವಾಡಿದ ನಂತರ ಈಕೆ ನೇಣಿಗೆ ಶರಣಾಗಿದ್ದಾಳೆ. ಕುಟುಂಬದವರು ರಾತ್ರಿ 9 ಗಂಟೆಗೆ ಪೊಲೀಸರಿಗೆ ತಿಳಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಬುಧವಾರ ಮೌನಿಕಾ ತಮ್ಮ ತಮ್ಮನೊಂದಿಗೆ ಯಾವುದೋ ವಿಚಾರಕ್ಕೆ ಜಗಳವಾಡಿದ್ದಳಂತೆ. ಇದಕ್ಕೆ ಸಂಬಂಧಿಸಿದಂತೆ ತಾಯಿ ರೇಣುಕಾ ಮೌನಿಕಾಳನ್ನು ಗದರಿಸಿದ್ದರು. ಈ ವಿಚಾರಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶಂಕಿಸಲಾಗಿದೆ.

ಮೌನಿಕಾ ತನ್ನ ವಾಟ್ಸಪ್‍ನಲ್ಲಿ ತನ್ನ ಜೀವನವೇ ದುರ್ಭರವಾಗಿದೆ ಸಾಯುತ್ತೇನೆ ಎಂದು ವಿವರಿಸುವ ಸ್ಟೇಟಸ್ ಹಾಕಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ದುಂಡಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೌನಿಕಾಳನ್ನು ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ ಕೊನೆ ಉಸಿರೆಳೆದಿದ್ದಾಳೆ. ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಗಾಂಧಿ ಆಸ್ಪತ್ರೆಗೆ ಕಳುಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *