ಅತ್ತೆಯ ಎದುರೇ ಪತ್ನಿಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪತಿರಾಯ!

Public TV
1 Min Read

ಬೆಂಗಳೂರು: ಅತ್ತೆಯ ಎದುರೇ ಪತ್ನಿಗೆ ನಾಲ್ಕೈದು ಬಾರಿ ಚೂರಿಯಿಂದ ಇರಿದು ಬರ್ಬರವಾಗಿ ಪತಿರಾಯನೊಬ್ಬ ಕೊಲೆಗೈದ ಹೃದಯವಿದ್ರಾವಕ ಘಟನೆಯೊಂದು ಇಂದು ಮಧ್ಯಾಹ್ನ ನಡೆದಿದೆ.

ಬೆಂಗಳೂರಿನ ಬೇಂದ್ರೆ ನಗರದಲ್ಲಿ ಈ ಘಟನೆ ನಡೆದಿದ್ದು, 30 ವರ್ಷ ಹೇಮ ಕೊಲೆಯಾದ ದುರ್ದೈವಿ ಮಹಿಳೆ.

40 ವರ್ಷದ ನಾಗರಾಜ ಕೊಲೆಗೈದ ಪತಿರಾಯನಾಗಿದ್ದು, ಈತ ಮೂಲತಃ ತಮಿಳುನಾಡು ಮೂಲದವನು ಎನ್ನಲಾಗುತ್ತಿದೆ. ಎರಡು ತಿಂಗಳ ಹಿಂದೆಯಷ್ಟೇ ಕುಟುಂಬ ಬೇಂದ್ರೆಗೆ ಬಂದು ನೆಲೆಸಿತ್ತು. ಪತ್ನಿಯ ಶೀಲಶಂಕಿಸಿ ಈ ಹತ್ಯೆ ನಡೆದಿದೆ ಅಂತಾ ಹೇಳಲಾಗುತ್ತಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಲೆಯ ಬಳಿಕ ನಾಗರಾಜ್ ಮನೆಯ ಬಾಗಿಲು ಹಾಕಿ ಪರಾರಿಯಾಗಿದ್ದಾನೆ. ಆದ್ರೆ ಪೊಲೀಸರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ ಅಂತಾ ಶಂಕೆ ವ್ಯಕ್ತಪಡಿಸಿದ್ದಾರೆ.

ಅತ್ತೆಯ ಎದುರೇ ನಾಗರಾಜ ಪತ್ನಿ ಹೇಮಾರಿಗೆ ನಾಲ್ಕೈದು ಬಾರಿ ಚೂರಿಯಿಂದ ಇರಿದಿದ್ದರಿಂದ ಘಟನೆಯನ್ನು ಕಣ್ಣಾರೆ ನೋಡಿದ ಹೇಮಾ ತಾಯಿ ಇನ್ನೂ ಶಾಕ್ ನಿಂದ ಹೊರಬಂದಿಲ್ಲ.

ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *