ಗರ್ಭಿಣಿ, ಎರಡೂವರೆ ವರ್ಷದ ಕಂದಮ್ಮನಿಗೆ ಬೆಂಕಿ ಇಟ್ಟ ಪತಿ!

Public TV
1 Min Read

ಚಾಮರಾಜನಗರ: ಆರು ತಿಂಗಳ ಗರ್ಭಿಣಿ ಮತ್ತು ಎರಡೂವರೆ ವರ್ಷದ ಹೆಣ್ಣು ಮಗು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ನಡೆದಿದೆ.

ಬೆಂಕಿಯಲ್ಲಿ ವಿಲವಿಲನೆ ಓದ್ದಾಡಿ ಗರ್ಭಿಣಿ ಮತ್ತು ಹೆಣ್ಣು ಮಗು ಸಾವನ್ನಪ್ಪಿದ್ದಾರೆ. ಲಕ್ಷ್ಮಿ (24) ಮತ್ತು ಪ್ರಣೀತ ಸಾವನ್ನಪ್ಪಿರುವ ಗರ್ಭಿಣಿ ಮತ್ತು ಹೆಣ್ಣುಮಗು. ಗಂಡ, ಅತ್ತೆ-ಮಾವ ಸೇರಿಕೊಂಡು ಗರ್ಭಿಣಿ ಹಾಗೂ ಹೆಣ್ಣು ಮಗುವಿಗೆ ಸೀಮೆಎಣ್ಣೆ ಸುರಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ನಾಲ್ಕು ವರ್ಷದ ಹಿಂದೆ ಮಹಾಲಕ್ಷ್ಮಿ ದೊಡ್ಡಮೋಳೆ ಗ್ರಾಮದ ಸೋಮಶೇಖರ್ ಎಂಬವನನ್ನು ಮದುವೆ ಆಗಿದ್ದರು. ಮದುವೆಯಾದ ವರ್ಷದಿಂದಲೂ ಕೂಡ ಗಂಡ-ಹೆಂಡತಿಯರ ನಡುವೆ ಗಲಾಟೆಗಳು ನಡೆಯುತ್ತಿದ್ದವು. ಬುಧವಾರ ಗಂಡ ಮತ್ತು ಅತ್ತೆ-ಮಾವ ಸೇರಿ ಗರ್ಭಿಣಿ ಮತ್ತು ಹೆಣ್ಣು ಮಗುವಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಮಹಾಲಕ್ಷ್ಮಿ ಪೋಷಕರು ಆರೋಪಿಸಿದ್ದಾರೆ.

ಸದ್ಯ ಗಂಡ ಮತ್ತು ಅತ್ತೆ-ಮಾವ ತಲೆಮರೆಸಿಕೊಂಡಿದ್ದು, ಈ ಕುರಿತು ಚಾಮರಾಜನಗರದ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ವಿಶೇಷ ಜಾಲ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *