ಕೇವಲ 20 ರೂ. ಗಾಗಿ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ!

Public TV
1 Min Read

ಬೆಂಗಳೂರು: ಪತಿಯೇ ತನ್ನ ಪತ್ನಿಯ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರು ಹೊರವಲಯದ ಹೆಸರಘಟ್ಟ ರಸ್ತೆಯ ಚಿಕ್ಕಸಂದ್ರದಲ್ಲಿ ನಡೆದಿರುವ ಬಗ್ಗೆ ಇದೀಗ ಬೆಳಕಿಗೆ ಬಂದಿದೆ. ಕಸ್ತೂರಿ(35) ಕೊಲೆಯಾದ ದುರ್ದೈವಿ. ಮಧ್ಯಪ್ರದೇಶ ಮೂಲದ ರಾಜಾಸಿಂಗ್ ತನ್ನ ಪತ್ನಿ ಕಸ್ತೂರಿಯನ್ನು ಕೊಲೆಗೈದಿದ್ದಾನೆ.

ಕುಡಿಯಲು 20 ರೂಪಾಯಿ ನೀಡಲಿಲ್ಲ ಎಂದು ಕೇವಲ 20 ರೂಪಾಯಿಯ ಆಸೆಗೆ ಕೊಲೆ ನಡೆದಿರುವುದು ದುರಾದೃಷ್ಟಕರವಾಗಿದೆ. ಮಧ್ಯಪ್ರದೇಶದಿಂದ 10 ದಿನಗಳ ಹಿಂದೆಯಷ್ಟೇ ಕಟ್ಟಡ ನಿರ್ಮಾಣ ಮಾಡುವ ಕೆಲಸಕ್ಕಾಗಿ ಬೆಂಗಳೂರಿಗೆ ದಂಪತಿ ಆಗಮಿಸಿದ್ದರು.

ಸದ್ಯ ಆರೋಪಿ ರಾಜಾಸಿಂಗ್ ನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *