ಪತ್ನಿಯ ಪ್ರಿಯಕರನಿಗೆ ಅವಾಜ್ ಹಾಕಿದ ಪತಿ-ಮುಂದೇನಾಯ್ತು, ಈ ಸ್ಟೋರಿ ಓದಿ

Public TV
1 Min Read

ಕಲಬುರ್ಗಿ: ಪತ್ನಿಯ ಪ್ರಿಯಕರನಿಗೆ ಅವಾಜ್ ಹಾಕಿದ್ದ ಪತಿಯೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿ, ಬೆತ್ತಲೆಗೊಳಿಸಿ ರಸ್ತೆ ಮಧ್ಯೆ ಎಸೆದಿರುವ ಅಮಾನವೀಯ ಘಟನೆ ನಗರದ ಗಾಜಿಪುರ ಬಡಾವಣೆಯಲ್ಲಿ ನಡೆದಿದೆ.

ಮಹೇಶ್ ಹಲ್ಲೆಗೊಳಗಾದ ಪತಿರಾಯ. ಮಹೇಶ್ ಕಳೆದ ಆರು ವರ್ಷಗಳ ಹಿಂದೆ ಶಶಿಕಲಾ ಎಂಬವನರನ್ನು ಮದುವೆಯಾಗಿದ್ದರು. ಆದರೆ ಪತ್ನಿ ಶಶಿಕಲಾ ಮಾತ್ರ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಪತ್ನಿಯ ಅಕ್ರಮ ಸಂಬಂಧ ತಿಳಿದ ಮಹೇಶ್ ಮಂಗಳವಾರ ಶಶಿಕಲಾ ಪ್ರಿಯಕರನಿಗೆನ ಅವಾಚ್ಯ ಶಬ್ಧಗಳನ್ನು ಬಳಸಿ ಬೈದು ಅವಾಜ್ ಹಾಕಿದ್ದಾನೆ.

ಮಹೇಶ್ ಅವಾಜ್ ಹಾಕಿದ್ದರಿಂದ ಕೋಪಗೊಂಡ ಪ್ರಿಯಕರ ತನ್ನ ಸ್ನೇಹಿತರೊಂದಿಗೆ ಬಂದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಬಳಿಕ ಮಹೇಶನನ್ನು ಪೂರ್ಣ ಬೆತ್ತಲೆಗೊಳಿಸಿ ನಗರದ ಲಾರಿ ತಂಗುದಾಣದಲ್ಲಿ ಬೀಸಾಡಿ ಹೋಗಿದ್ದಾರೆ.

ಮಹೇಶನನ್ನು ಸ್ಥಳೀಯರು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶಶಿಕಲಾ, ನನ್ನ ಮೇಲಿನ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಈ ಕುರಿತು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *