ಸ್ನೇಹಿತನಿಂದ ಹೆಂಡ್ತಿ ಸೀರೆ ಎಳೆಸಿ ಪತಿಯಿಂದಲೇ ಮಾನಭಂಗಕ್ಕೆ ಯತ್ನ!

Public TV
1 Min Read

ಬೆಂಗಳೂರು: ಕಟ್ಟಿಕೊಂಡ ಹೆಂಡತಿ ಮೇಲೆ ಯಾರಾದರೂ ಕಣ್ಣು ಹಾಕಿದ್ರೆ ಅವರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಅಂತದ್ರಲ್ಲಿ ಪಾಪಿ ಪತಿಯೊಬ್ಬ ಸ್ನೇಹಿತನ ಜೊತೆ ಸೇರಿ ಕೈ ಹಿಡಿದ ಧರ್ಮಪತ್ನಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ.

ಬೆಂಗಳೂರಿನ ಏರ್‍ಪೋರ್ಟ್ ಬಳಿಯ ಸಾದಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಈ ಘಟನೆಯ ಸೂತ್ರದಾರ ಮುನಿರಾಜು. ಈತ ಮೊದಲ ಮದುವೆಯಾಗಿ 18 ವರ್ಷಗಳೇ ಕಳೆದಿತ್ತು. ಆದ್ರೆ ಮೊದಲ ಹೆಂಡತಿಗೆ ಗೊತ್ತಾಗದ ಹಾಗೆ ಮತ್ತೊಂದು ಮದುವೆ ಮಾಡಿಕೊಂಡಿದ್ದ.

ಕಳೆದ ಮೂರು ದಿನಗಳ ಹಿಂದೆ ಸ್ನೇಹಿತನ ಜೊತೆ ಮುನಿರಾಜ ತನ್ನ ಮೊದಲ ಹೆಂಡತಿಯ ಮನೆಗೆ ಬಂದಿದ್ದಾನೆ. ಚೆನ್ನಾಗಿ ಕುಡಿದು ಸ್ನೇಹಿತನ ಜೊತೆಯಲ್ಲಿ ಹಾಸಿಗೆ ಹಂಚಿಕೊಳ್ಳುವಂತೆ ಪಾಪಿ ಪತಿ ಹೇಳಿದ್ದಾನೆ. ಆದರೆ ಈ ಮಾತು ಪತ್ನಿಯನ್ನ ಕೆರಳಿಸಿದೆ. ಇದಕ್ಕೆ ಬಿಲ್‍ಕುಲ್ ಒಪ್ಪದ ಪತ್ನಿಯನ್ನ ಪತಿ ಹಾಗು ಆತನ ಸ್ನೇಹಿತ ಸೇರಿ ಸೀರೆ ಹಿಡಿದು ಎಳೆದಾಡಿದ್ದಾರೆ. ಅಲ್ಲದೇ ಕಾಮುಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ಈ ವೇಳೆ ತಾಯಿಯ ಸಹಾಯಕ್ಕೆ ಬಂದ ಮಕ್ಕಳನ್ನು ಇದೇ ನೀಚರು ಥಳಿಸಿದ್ದಾರೆ. ಮಕ್ಕಳ ಕೂಗಾಟ ಕೇಳಿದ ಸ್ಥಳೀಯರು ಮನೆ ಬಳಿ ಬಂದು ಆರೋಪಿಗಳಾದ ಮುನಿರಾಜು ಆತನ ಸ್ನೇಹಿತರಾದ ರವಿ ಮತ್ತು ಸುಬ್ರಮಣಿಯನ್ನ ಬಂಧಿಸಿದ್ದಾರೆ.

ಸದ್ಯ ಬೆಂಗಳೂರು ಏರ್‍ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸ್ರು ಆರೋಪಿಗಳ ವಿಚಾರಣೆ ನಡೆಸ್ತಿದ್ದಾರೆ.

https://www.youtube.com/watch?v=a9QGXgvv6kM

 

Share This Article
Leave a Comment

Leave a Reply

Your email address will not be published. Required fields are marked *