ಪ್ರೀತ್ಸೆ ಪ್ರೀತ್ಸೆ ಅಂತಾ ಬೆನ್ನುಬಿದ್ದ ಹುಚ್ಚ ವೆಂಕಟ್ – ರಿಯಾಲಿಟಿ ಶೋ ರಚನಾಗೆ ಫುಲ್ ಸಂಕಟ – ಮಧ್ಯರಾತ್ರಿ ನಡೀತು ಹೈಡ್ರಾಮ

Public TV
1 Min Read

ಬೆಂಗಳೂರು: ನಟ ಹುಚ್ಚ ವೆಂಕಟ್ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಫಿನಾಯಿಲ್ ಕುಡಿದು ಭಾನುವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆದರೆ ಈ ಕುರಿತು ನಟಿ ರಚನಾ ಹೇಳೋದೇ ಬೇರೆ, ನಾನು ಯಾವತ್ತೂ ವೆಂಕಟ್‍ನ ಲವ್ ಮಾಡ್ತಿನಿ ಅಂತ ಹೇಳಿಲ್ಲ. ಹುಚ್ಚ ವೆಂಕಟ್ ಜೊತೆ ಸ್ನೇಹ ಇತ್ತು ಅಷ್ಟೇ ವಿನಃ ಮದುವೆ ಆಗ್ತಿನಿ ಅಂತ ಹೇಳಿರ್ಲಿಲ್ಲ ಎಂದು ಹೇಳಿದ್ದಾರೆ.

 

ರಚನಾ ಮತ್ತು ನನಗೂ ಲವ್ ಆಗಿತ್ತು. ರಚನಾ ನನ್ನ ಪ್ರೇಮವನ್ನ ನಿರಾಕರಿಸುತ್ತಿದ್ದಾರೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹುಚ್ಚ ವೆಂಕಟ್ ಮೊಬೈಲ್ ಸಂದೇಶ ಕಳಿಸಿದ್ದಾರೆ. ಇನ್ನು ಫಿನಾಯಿಲ್ ಕುಡಿದ ಹುಚ್ಚ ವೆಂಕಟ್‍ರನ್ನು ನಗರದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೆಂಕಟ್ ಸಹೋದರ ಕುಶಾಲ್ ಬಾಬು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ದಾಖಲು ತೆರಳಿದ್ದ ಹುಚ್ಚ ವೆಂಕಟ್ ಅಲ್ಲಿಯೂ ತಮ್ಮ ಹುಚ್ಚಾಟವನ್ನು ಪ್ರದರ್ಶನ ಮಾಡಿದ್ದರು. ಚಿಕಿತ್ಸೆ ಕೊಡುವ ಬದಲು ವೈದ್ಯರು ನನ್ನನ್ನ ಏನೇನೋ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಆಸ್ಪತ್ರೆಯಿಂದ ಹೊರಗೆ ಬಂದು ರಂಪಾಟ ಮಾಡಿದ್ದರು. ಇನ್ನು ಆಸ್ಪತ್ರೆ ಯಶವಂತಪುರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗು ಹುಚ್ಚ ವೆಂಕಟ್‍ನಿಂದ ಮಾಹಿತಿ ಪಡೆದಿದ್ದಾರೆ.

https://www.youtube.com/watch?v=wcpLROyAkHg

https://www.youtube.com/watch?v=DLMQPHIr9A4

Share This Article
Leave a Comment

Leave a Reply

Your email address will not be published. Required fields are marked *