ಹೊಲದಲ್ಲಿ ಅವಿತು ಕುಳಿತ ಹುಲಿ- ಭಯಭೀತರಾದ ಗ್ರಾಮಸ್ಥರು

Public TV
1 Min Read

– ಅರಣ್ಯಾಧಿಕಾರಿಗಳಿಂದ ಬಿಗಿ ಭದ್ರತೆ

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದ ಹತ್ತಿರ ಇರುವ ಹೊಲವೊಂದರಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಬೆಂಡಲಗಟ್ಟಿ ಗ್ರಾಮದ ವಿಶ್ವನಾಥ ವೈದ್ಯ ಎಂಬವರ ಗೋವಿನ ಜೋಳದಲ್ಲಿ ಹುಲಿ ಅವಿತುಕೊಂಡು ಕುಳಿತಿದ್ದು, ಹುಲಿ ಗ್ರಾಮದ ಒಳಗೆ ಹೋಗದಂತೆ ಸುತ್ತಲೂ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ.

ದಾಂಡೇಲಿ ಕಾಳಿ ಅರಣ್ಯ ಪ್ರದೇಶದಿಂದ ಹುಲಿ ಬಂದಿರುವುದಾಗಿ ತಿಳಿದುಬಂದಿದ್ದು ಹುಲಿ ಗೋವಿನ ಜೋಳದ ಹೊಲದಲ್ಲಿ ಇರುವುದನ್ನ ಡ್ರೋಣ್ ಕ್ಯಾಮೆರಾದ ಮೂಲಕ ಸೆರೆಹಿಡಿದಿದ್ದು ಈಗಾಗಲೇ ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.

ಹುಲಿ ಗ್ರಾಮಕ್ಕೆ ಬಂದ ವಿಚಾರ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಂಜಾಗೃತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅರಣ್ಯಾಧಿಕಾರಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಧಾರವಾಡ ವಲಯ ಸಂರಕ್ಷಣಾಧಿಕಾರಿ ಬಸವರಾಜ ಇಳಿಗೆರ್ ತಾಲೂಕಿನ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *