ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡೇ ಮಾಡ್ತೀವಿ – ಗುಂಡು ಹಾರಿಸ್ತೀರಾ ಹಾರಿಸಿ: ಮುತಾಲಿಕ್

Public TV
1 Min Read

ಹುಬ್ಬಳ್ಳಿ: ಈ ಬಾರಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡೇ ಮಾಡ್ತೀವಿ, ಯಾವುದೇ ಕಾನೂನು ತಂದರು ನಮ್ಮನ್ನು ಕಟ್ಟಿಹಾಕಲು ಆಗೋದಿಲ್ಲ. ಸಾವಿರಾರು ಜನ ಮೈದಾನಕ್ಕೆ ನುಗ್ಗುತ್ತೇವೆ. ಗುಂಡು ಹಾರಿಸುತ್ತೀರಾ ಹಾರಿಸಿ ಯಾವುದಕ್ಕೂ ಬಗ್ಗಲ್ಲ ಎಂದು ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈಗ ನೀವು ನಮಗೆ ತೊಂದರೆ ಕೊಟ್ಟರೆ ನಾಳೆ ಬೇರೆಯವರು ನಮಾಜ್ ಮಾಡೋದಕ್ಕೆ ಕಷ್ಟ ಆಗುತ್ತೆ. ಮುಂದೆ ನಮಾಜ್ ಮಾಡಲು ಬಿಡೋದಿಲ್ಲ. ಸದನ ಸಮಿತಿ ಮಾಡಿದ್ದೆ ಅವೈಜ್ಞಾನಿಕವಾಗಿದ್ದು, ಸುಮ್ಮನೆ ಕಾಲಹರಣ ಮಾಡಲು ಸಮಿತಿ ರಚನೆ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ದೇಶದ್ರೋಹದ ಪಾಠ ಮಾಡಿದ್ರೆ ನಾವೇ ಮದರಸಾ ಬ್ಯಾನ್ ಮಾಡ್ತೀವಿ – ವಕ್ಫ್ ಅಧ್ಯಕ್ಷ

ಹಿಂದೂಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಹಿಂದೂ ದೇವತೆ ಪ್ರತಿಷ್ಠಾಪನೆ ಮಾಡಲು ಇಂತಹ ದುಸ್ಥಿತಿ ಬಂದಿದೆ. ಗಣೇಶೋತ್ಸವ ವಿರೋಧಿಸಿದರೆ, ಚುನಾವಣೆಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಜನಪ್ರತಿನಿಧಿಗಳಿಗೆ ಮುತಾಲಿಕ್ ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಪೊಲಿಟಿಕಲ್ ಬಿಗ್ ಟರ್ನ್- ಕಾಂಗ್ರೆಸ್ ತೊರೆಯುತ್ತಾರಾ ಕೆ.ಎಚ್. ಮುನಿಯಪ್ಪ..?

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *