ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ- ಆತ್ಮಹತ್ಯೆ ಅಲ್ಲ ಕೊಲೆ ಎಂದ ಮೃತಳ ಪೋಷಕರು!

Public TV
0 Min Read

ಬಾಗಲಕೋಟೆ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾದ ಘಟನೆ ಬಾಗಲಕೋಟೆಯ ನವನಗರ ಸೆಕ್ಟರ್ ನಂ. 3ರಲ್ಲಿ ಮಧ್ಯರಾತ್ರಿ ನಡೆದಿದೆ.

ರೂಪಾ ಮಂಜುನಾಥ್ ಬೂದಿಹಾಳ(26) ಮೃತ ಗೃಹಿಣಿ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ರೂಪಾ ಪೋಷಕರು ಆರೋಪಿಸಿದ್ದಾರೆ. ಮೃತಳ ಗಂಡ ಮಂಜುನಾಥ್ ಬೂದಿಹಾಳ ಹಾಗೂ ಅತ್ತೆ ಮಾವ ನಮ್ಮ ಮಗಳ ಕೊಲೆ ಮಾಡಿದ್ದಾರೆ ಅಂತಾ ಮಹಿಳೆ ಪೋಷಕರು ಆರೋಪಿಸುತ್ತಿದ್ದಾರೆ.

ರೂಪಾ ಮಂಜುನಾಥ್ ಪೋಷಕರು ಅತ್ತೆ ಲಕ್ಷಮವ್ವ ಹಾಗೂ ಮಾವ ನಾಗಪ್ಪಗೆ ಥಳಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *