ಹಲಾಲ್ ದಂಗಲ್ ಇದು ಅಂತ್ಯವಲ್ಲ ಆರಂಭ

Public TV
2 Min Read

ಬೆಂಗಳೂರು: ಹಲಾಲ್ ಬಾಯ್ಕಾಟ್‍ಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಹಲಾಲ್ ದಂಗಲ್‍ನ್ನು ಒಂದು ದಿನಗಷ್ಟೇ ಸಿಮೀತವಾಗಿಸದೇ ಇದನ್ನು ದೊಡ್ಡ ಮಟ್ಟದಲ್ಲಿ ಆರಂಭ ಮಾಡಲು ಹಿಂದೂ ಸಂಘಟನೆಗಳು ಈಗ ಸಜ್ಜಾಗಿದೆ.

ಯಗಾದಿ ಮರು ದಿನವಾದ ಹೊಸತೊಡಕು ವೇಳೆ ಗ್ರಾಹಕರು ಹಿಂದೂ ಅಂಗಡಿಗಳ ಮುಂದೆ ಸಾಲು ಸಾಲು ನಿಂತಿದ್ದರು. ಜಟ್ಕಾ ಕಟ್ ಖರೀದಿಗಾಗಿಯೇ ಬೇರೆ ಜಾಗಗಳಿಂದ ಬಂದಿದ್ದರು. ಭಾನುವಾರ ಒಂದೇ ದಿನಕ್ಕೆ ಜಟ್ಕಾ ಕಟ್ ಅಂಗಡಿಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ವ್ಯಾಪಾರವಾಗಿತ್ತು. ಇದರಿಂದಾಗಿ ಹಿಂದೂಪರ ಸಂಘಟನೆಗಳು ಫುಲ್ ಉತ್ಸಾಹದಲ್ಲಿದ್ದಾರೆ.

ರಾಜ್ಯಾದ್ಯಂತ ಜಟ್ಕಾ ಕಟ್‍ಗೆ ಜನರು ಬಾರಿ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳು ರಾಜ್ಯದ ಪ್ರತಿ ಜಿಲ್ಲೆ, ತಾಲೂಕು, ವಾರ್ಡ್ ಮಟ್ಟದಲ್ಲಿ ಜಟ್ಕಾ ಕಟ್ ಓಪನ್‍ಗೆ ಸಿದ್ಧತೆ ನಡೆಸಿವೆ. ಅಷ್ಟೇ ಅಲ್ಲದೇ ರಾಜ್ಯ ರಾಜಧಾನಿ ಬೆಂಗಳೂರಿನ 198 ವಾರ್ಡ್‍ಗಳಲ್ಲೂ ಜಟ್ಕಾ ಕಟ್ ಅಂಗಡಿ ತೆರೆಯಲು ಮುಂದಾಗಿವೆ. ಇದನ್ನೂ ಓದಿ: ನಾನು ಮಾಡಿರುವ ಕೆಲಸಕ್ಕೆ ನಿಮಗೆ ಪ್ರೀತಿ ಬಂದ್ರೆ ಓಟ್ ಹಾಕಿ ಕೂಲಿ ಕೊಡಿ: ಪ್ರೀತಂಗೌಡ

ಸದ್ಯಕ್ಕೆ ಬಿಬಿಎಂಪಿ ತಾತ್ಕಾಲಿಕ ಜಟ್ಕಾ ಕಟ್ ಶಾಪ್‍ಗಳನ್ನು ತೆರೆಯಲು ಅನುಮತಿ ನೀಡಿರಲಿಲ್ಲ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಅನುಮತಿ ಪಡೆದು ಜಟ್ಕಾ ಕಟ್‍ಗಳ ಓಪನ್ ಮಾಡಲು ಹಿಂದೂಪರ ಸಂಘಟನೆಗಳು ಚಿಂತನೆ ನಡೆಸಿವೆ. ಈಗಾಗಲೇ ಆಸಕ್ತ ಯುವಕರಿಗೆ ಜಟ್ಕಾ ಕಟ್ ಟ್ರೈನಿಂಗ್ ನೀಡಲಾಗುತ್ತಿದೆ.

ಇನ್ಮುಂದೆ ಪ್ರತಿ ಭಾನುವಾರ ಪ್ರತಿಹಬ್ಬಕ್ಕೂ ಹಲಾಲ್ ಬಾಯ್ಕಾಟ್ ಅಭಿಯಾನ ಮಾಡಲು ಪ್ಲ್ಯಾನ್ ನಡೆಸಿವೆ. ಅಷ್ಟೇ ಅಲ್ಲದೇ, ಸಭೆ, ಸಮಾರಂಭ ಬಾಡೂಟಕ್ಕೆ ಜಟ್ಕಾ ಕಟ್ ಬಳಸುವಂತೆ ಜಾಗೃತಿ ಮೂಡಿಲು ಹಿಂದೂ ಸಂಘಟನೆಗಳು ತಯಾರಿ ನಡೆಸುತ್ತಿವೆ. ಹಿಂದೂಗಳು, ಹಿಂದೂ ವ್ಯಕ್ತಿಗಳಿಂದಲೇ ಮಾಂಸ ಖರೀದಿ ಮಾಡುವಂತೆ ಮನವಿಯನ್ನು ಮಾಡಲಾಗುತ್ತದೆ. ಇದನ್ನೂ ಓದಿ: ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಮುಂದಾದ ಹಿಂದೂ ಸಂಘಟನೆಗಳು

NONVEG

ಹಿಜಬ್‍ಗೆ ಆಗ್ರಹಿಸಿ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಕ್ಕೆ ಅಂಗಡಿಗಳನ್ನು ಬಂದ್ ಮಾಡಿದ್ದ ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಹೊಡೆತ ನೀಡಲು ಆರಂಭಗೊಂಡ ಜಟ್ಕಾ ಕಟ್ ಅಭಿಯಾನ ಯಶಸ್ವಿಯಾಗುತ್ತಾ ಎನ್ನವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಜಟ್ಕಾ ಕಟ್ ಮೂಲಕ ದೊಡ್ಡದಾಗಿ ಮುಸ್ಲಿಂ ವ್ಯಾಪಾರಿಗಳಿಗೆ ಠಕ್ಕರ್ ನೀಡಲು ಹಿಂದೂ ಸಂಘಟನೆಗಳು ಸಕಲ ಸಿದ್ಧತೆ ನಡೆಸುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *