ಮೇಕೆಗೆ ತಾಳಿ ಕಟ್ಟಿದ ಯುವಕ – ಮದುವೆಯಾಗಲು ಇತ್ತು ಬಲವಾದ ಕಾರಣ

Public TV
1 Min Read

ಅಮರಾವತಿ: ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮಹತ್ತರವಾದ ಘಟ್ಟ. ಆದರೆ ಇಲ್ಲೊಬ್ಬ ಯುವಕ ಮೇಕೆಗೆ ತಾಳಿ ಕಟ್ಟಿ ಶಾಸ್ತ್ರೋಕ್ತವಾಗಿ ಮದುವೆ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಹೌದು ಆಂಧ್ರ ಪ್ರದೇಶದ ನಜಿವೀಡು ಮೂಲದ ಯುವಕನೊಬ್ಬ ಮದುವೆಯಾಗಲು ಕನ್ಯೆ ಹುಡುಕುತ್ತಿದ್ದ. ಈ ವೇಳೆ ಎಲ್ಲೂ ಕೂಡ ಕನ್ಯೆ ಸಿಗುತ್ತಿರಲಿಲ್ಲ. ಬಳಿಕ ಮನೆಯ ಹಿರಿಯರು ಜ್ಯೋತಿಷ್ಯರೊಬ್ಬರ ಬಳಿ ಯುವಕನ ಜಾತಕವನ್ನು ತೋರಿಸಿದ್ದಾರೆ. ಜ್ಯೋತಿಷಿ ಯುವಕನ ಜಾತಕ ನೋಡಿ ಈತನಿಗೆ ಎರಡು ಮದುವೆ ಆಗುವ ಯೋಗ ಇದೆ ಎಂದು ಜ್ಯೋತಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡಲು ಹೋಗಿ ಬಾಲಕಿಯನ್ನ ಅಪಹರಿಸಿದ ಖತರನಾಕ್ ಕಳ್ಳ

ಈ ಯುವಕ ಮದುವೆ ಆದರು ಕೂಡ ಮೊದಲನೇ ಹೆಂಡತಿ ಮರಣ ಹೊಂದುತ್ತಾಳೆ ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದರು. ಈ ಮಾತು ಕೇಳಿ ಕುಟುಂಬದವರು ಈ ಸಮಸ್ಯೆಗೆ ಪರಿಹಾರ ಏನು ಎಂದು ಪ್ರಶ್ನಿಸಿದ್ದಾರೆ. ಬಳಿಕ ಯುವಕ ಮೊದಲು ಮೇಕೆಯನ್ನು ಮದುವೆ ಆಗುವಂತೆ ಜ್ಯೋತಿಷಿ ಪರಿಹಾರ ಸೂಚಿಸಿದ್ದಾರೆ. ಇದನ್ನು ಕೇಳಿ ಯುವಕನ ಮನೆಯವರು ಯುವಕನಿಗೆ ಮೇಕೆಯೊಂದಿಗೆ ಮದುವೆ ಮಾಡಲು ತೀರ್ಮಾನಿಸಿದ್ದಾರೆ.

ಮೇಕೆಯನ್ನು ಕೂಡ ಹುಡುಕಿ ತಂದು ಯುಗಾದಿ ದಿನ ನವಗ್ರಹ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮೇಕೆ ಜೊತೆ ಯುವಕನ ಮದುವೆ ನೆರವೇರಿಸಿದ್ದಾರೆ. ಮದುವೆಯಲ್ಲಿ ಯುವಕ, ಯುವಕನ ಪೋಷಕರು ಮತ್ತು ಅರ್ಚಕರು ಮಾತ್ರ ಭಾಗಿಯಾಗಿದ್ದರು. ಹೀಗೆ ಜ್ಯೋತಿಷಿ ಮಾತಿನಂತೆ ಯುವಕನಿಗೆ ಮೇಕೆ ಜೊತೆ ಮದುವೆ ಮಾಡಿ ದೋಷ ಪರಿಹಾರ ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ: 13ರ ಬಾಲಕನ ಮೇಲೆ ಪೊಲೀಸ್ ದರ್ಪ – ನಡು ರಸ್ತೆಯಲ್ಲಿ ಕಪಾಳಮೋಕ್ಷ ಮಾಡಿದ ವೀಡಿಯೋ ವೈರಲ್

Share This Article
Leave a Comment

Leave a Reply

Your email address will not be published. Required fields are marked *