ಬಯೋ ಪಾರ್ಕ್ ಉದ್ಘಾಟನೆಯಲ್ಲಿ ಸಚಿವ ರಮಾನಾಥ ರೈ ಮೇಲೆ ಹೆಜ್ಜೇನು ದಾಳಿ

Public TV
1 Min Read

ಬೆಳಗಾವಿ: ಅರಣ್ಯ ಸಚಿವ ರಮಾನಾಥ ರೈ ಮೇಲೆ ಹೆಜ್ಜೆನು ದಾಳಿ ಮಾಡಿದ್ದು, ಎದ್ನೋ ಬಿದ್ನೋ ಅಂತ ಓಡಿ ಹೋದ ಘಟನೆ ನಡೆದಿದೆ.

ಬೆಳಗಾವಿಯ ಬಯೋ ಪಾರ್ಕ್ ಉದ್ಘಾಟನೆಗೆ ಸಚಿವ ರಮಾನಾಥ ರೈ, ಸಂಸದ ಸುರೇಶ್ ಅಂಗಡಿ ಸೇರಿದಂತೆ ಅರಣ್ಯ ಇಲಾಖೆಯ ಅನೇಕ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಸುರೇಶ್ ಅಂಗಡಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ಹೆಜ್ಜೆನು ದಾಳಿ ನಡೆಸಿದೆ. ಡ್ರೋನ್ ಕ್ಯಾಮರಾ ಸದ್ದಿನಿಂದ ಮರದಲ್ಲಿ ಕುಳಿತಿದ್ದ ಹೆಜ್ಜೆನ್ನು ಸಮಾರಂಭದಲ್ಲಿ ಪಾಲ್ಗೊಂಡವರ ಮೇಲೆ ದಾಳಿ ನಡೆಸಿದೆ. ಹೀಗಾಗಿ ಏಕಾಏಕಿ ಸಚಿವ ರಮಾನಾಥ ರೈ ಸೇರಿ ಎಲ್ಲರೂ ಸಮಾರಂಭ ಬಿಟ್ಟು ಅರ್ಧದಲ್ಲಿ ಓಡಿ ಹೋಗಿದ್ದಾರೆ.

ಘಟನೆಯಲ್ಲಿ 6ಕ್ಕೂ ಹೆಚ್ಚು ಜನರಿಗೆ ಹೆಜ್ಜೇನು ಕಡಿದು ಗಾಯವಾಗಿದೆ. ಗಾಯಾಳುಗಳಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *