ನಾನು ಎಲ್ಲಾ ಶಾಸಕರ ಕೈಗೆ ಸಿಕ್ತೇನೆ, ಬೇರೆ ಸಚಿವರ ಬಗ್ಗೆ ಹೇಳಲ್ಲ: ಪರಮೇಶ್ವರ್‌

Public TV
2 Min Read

– ಸುರ್ಜೇವಾಲಾ ರಾಜ್ಯಕ್ಕೆ ಬಂದ್ಮೇಲೆ ಶಾಸಕರನ್ನ ಭೇಟಿಯಾಗಬಹುದು

ಬೆಂಗಳೂರು: ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Surjewala) ಆಗಮಿಸುತ್ತಿರೋದು ಯಾಕೆ ಅಂತ ಗೊತ್ತಿಲ್ಲ. ರಾಜ್ಯಕ್ಕೆ ಅವರು ಬಂದ ಮೇಲೆ ಶಾಸಕರ ಜೊತೆ ಮಾತಾಡಬಹುದು ಅಂತ ಸಚಿವ ಪರಮೇಶ್ವರ್ (G Parameshwar) ‌ತಿಳಿಸಿದ್ದಾರೆ.

ಶಾಸಕರ ಅಸಮಾಧಾನ ಹಿನ್ನೆಲೆ ಸುರ್ಜೇವಾಲ ರಾಜ್ಯಕ್ಕೆ ಆಗಮಿಸುತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸುರ್ಜೇವಾಲ ಬರ್ತಿದ್ದಾರೆ ಅಂತ ಕೇಳಿದ್ದೇನೆ. ಅವರು ಮಾಮೂಲಿ ಬರ್ತಾನೇ ಇರ್ತಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪ್ರತಿ ಬಾರಿ ಬಂದು ಹೋಗ್ತಾರೆ. ಈ ಬಾರಿ ಯಾಕೆ ಬರ್ತಿದ್ದಾರೆ ಗೊತ್ತಿಲ್ಲ. ಸ್ಪೆಷಲ್ ಆಗಿ ಯಾಕೆ ಬರ್ತಿದ್ದಾರೆ ಅಂತ ನನಗೇನು ಮಾಹಿತಿ ಇಲ್ಲ. ಸುರ್ಜೇವಾಲಾ ಬಂದಾಗ ಶಾಸಕರು ಭೇಟಿ ಅಗತ್ಯವಿದ್ದರೇ ಮಾಡಬಹುದು ಎಂದರು. ಇದನ್ನೂ ಓದಿ: ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿ ಶಾಕ್‌ ಕೊಟ್ಟ ಯುವತಿ; ಬೆಂಗಳೂರು-ಹೈದರಾಬಾದ್‌ ರೈಲು ಸೇವೆ ಸ್ಥಗಿತ

ರಾಜ್ಯ ಉಸ್ತುವಾರಿ ಸುರ್ಜೇವಾಲಾ ಬದಲಾವಣೆ ಒತ್ತಾಯ ಬಂದಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ಹೈಕಮಾಂಡ್‌ಗೆ ಸಂಬಂಧಿಸಿದ ವಿಷಯ. ಎಐಸಿಸಿಗೆ ಸಂಬಂಧಿಸಿದ ವಿಷಯ ನಾನು ಹೇಗೆ ಮಾತಾಡಲಿ? AICC ಅಧ್ಯಕ್ಷರು, ರಾಹುಲ್ ಗಾಂಧಿ ಇದನ್ನ ತೀರ್ಮಾನ ಮಾಡ್ತಾರೆ. ಯಾವ ರಾಜ್ಯಕ್ಕೆ ಯಾರನ್ನ ಉಸ್ತುವಾರಿ ಮಾಡಬೇಕು ಅಂತ. ರೀಶಫಲ್ ಒಂದೊಂದು ಸಾರಿ ಅಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಮೊಳಕೆ ಒಡೆಯಲಿವೆ ಧಾರವಾಡ ಕೃಷಿ ವಿವಿಯ ಮೆಂತೆ, ಹೆಸರು ಕಾಳು!

ನಾನು ಎಲ್ಲಾ ಶಾಸಕರ ಕೈಗೆ ಸಿಗುತ್ತೇನೆ
ಸಚಿವರು ಕೈಗೆ ಸಿಗುತ್ತಿಲ್ಲ ಎಂಬ ಶಾಸಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪರಂ, ನಾನು ಎಲ್ಲಾ ಶಾಸಕರ ಕೈಗೆ ಸಿಕ್ಕುತ್ತೇನೆ. ಶಾಸಕರಿಗೆ ಬೇರೆ ಮಂತ್ರಿಗಳು ಸಿಗದೇ ಹೋದರೆ, ಅದಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ ಅಂತ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಎಲ್ಲರಿಗೂ ಸಿಕ್ತೀನಿ. ಕಚೇರಿಯಲ್ಲಿ, ಮನೆಯಲ್ಲಿ ಸಿಕ್ತೀನಿ. ನನಗೇನು ಸಮಸ್ಯೆ ಇಲ್ಲ. ಬೇರೆ ಸಚಿವರು ಸಿಗೊಲ್ಲ ಅನ್ನೋ ಬಗ್ಗೆ ನಾನು ಹೇಗೆ ಹೇಳಲಿ? ಬೇರೆ ಸಚಿವರ ಬಗ್ಗೆ ನಾನು ಮಾತಾಡೊಲ್ಲ. ಎಂದಿದ್ದಾರೆ. ಇದನ್ನೂ ಓದಿ: ವೀರ ವನಿತೆಯಾದ ರಶ್ಮಿಕಾ ಮಂದಣ್ಣ- ಗೆಸ್‌ ಮಾಡಿದ್ರೆ ನಿಮಗೆ ಸಿಗುತ್ತೆ ಸರ್ಪ್ರೈಸ್ 

ಸರ್ಕಾರದಲ್ಲಿ ಯಾವುದೇ ಗೊಂದಲಗಳು ಇಲ್ಲ. ಸಿಎಂಗೂ ಶಾಸಕರಿಗೂ ಯಾವುದೇ ಗೊಂದಲ ಇಲ್ಲ. ಕೆಲ ಶಾಸಕರು ತಮ್ಮ ಕ್ಷೇತ್ರದ ಬಗ್ಗೆ ಮಾತಾಡಿದ್ದಾರೆ ಅಷ್ಟೇ ಇದಕ್ಕೆ ಇಡೀ ಸರ್ಕಾರವೇ ಗೊಂದಲ ಅಂತ ಹೇಳೋದು ಸರಿಯಲ್ಲ. ಸಿಎಂ ಅವರು ಇದೆಲ್ಲವನ್ನೂ ನೋಡ್ತಾರೆ ಅಂತ ತಿಳಿಸಿದ್ದಾರೆ.

Share This Article