ನಕ್ಸಲರು ರಕ್ತಪಾತ ನಡೆಸಿದ್ದು ಹೇಗೆ? ಹೃದಯ ಕಲಕುವ ಸಿಆರ್‍ಪಿಎಫ್ ಯೋಧನ ಮಾತುಗಳನ್ನು ಓದಿ

Public TV
1 Min Read

ರಾಯ್‍ಪುರ್: ಛತ್ತೀಸ್‍ಗಢದ ಸುಕ್ಮಾದಲ್ಲಿ ರಸ್ತೆ ಮಾರ್ಗ ತೆರವು ವೇಳೆ ಗಸ್ತಿನಲ್ಲಿದ್ದ ಸಿಆರ್‍ಪಿಎಫ್ ಯೋಧರ ಮೇಲೆ ನಕ್ಸಲರು ದಾಳಿ ನಡೆಸಿದ್ದು, 25 ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.  ಇಂದು ಗೃಹಸಚಿವ ರಾಜನಾಥ್ ಸಿಂಗ್ ಸುಕ್ಮಾ ಜಿಲ್ಲೆಗೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ್ರು.

ಬುರ್ಕಾಪಾಲ್ ಮತ್ತು ಛಿಂಟಾಗುಫಾ ಪ್ರದೇಶದ ನಡುವೆ ಯೋಧರು ಮತ್ತು ನಕ್ಸಲರ ನಡುವೆ ಸೋಮವಾರ ಮಧ್ಯಾಹ್ನ ಈ ಗುಂಡಿನ ದಾಳಿ ನಡೆದಿತ್ತು.

ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಯೋಧರೊಬ್ಬರು ಹೇಳಿಕೆ ನೀಡಿದ್ದು, ಸುಮಾರು 300 ನಕ್ಸಲರು ಯೋಧರ ಮೇಲೆ ದಾಳಿ  ಮಾಡಿದ್ರು ಎಂದು ಹೇಳಿದ್ದಾರೆ. ದಾಳಿಗೂ ಮುನ್ನ ನಕ್ಸಲರು ಸ್ಥಳೀಯರನ್ನು ಕಳುಹಿಸಿ ಯೋಧರಿರುವ ಸ್ಥಳದ ಬಗ್ಗೆ ಮಾಹಿತಿ ಪಡೆದಿದ್ರು ಎಂದು ಯೋಧ ಶೇರ್ ಮೊಹಮದ್ ಹೇಳಿದ್ದಾರೆ.

ಮಧ್ಯಾಹ್ನ 12.25ರ ವೇಳೆಗೆ ಈ ದಾಳಿ ನಡೆಯಿತು. ನಾವು 150 ಮಂದಿ ಇದ್ವಿ, ನಮ್ಮನ್ನು ಸುತ್ತುಗಟ್ಟಿ ಅವರು ದಾಳಿ ನಡೆಸಿದ್ರು, ನಾನು 3-4 ನಕ್ಸಲರ ಎದೆಗೆ ಗುಂಡಿನ ದಾಳಿ ನಡೆಸಿದ್ದೇನೆ ಎಂದು ಅವರು ತಿಳಿಸಿದರು.

300 ಕ್ಕೂ ಹೆಚ್ಚು ಮಂದಿ ದಾಳಿ ಮಾಡಿದ್ರು. ಅವರಲ್ಲಿ ಗ್ರಾಮಸ್ಥರು, ಮಹಿಳೆಯರು ಹಾಗೂ ಕಪ್ಪು ಸಮವಸ್ತ್ರ ಧರಿಸಿದ್ದವರು ಇದ್ರು. ಅವರ ಬಳಿ ರಾಕೆಟ್ ಲಾಂಚರ್, ಎಕೆ47, ಐಎನ್‍ಎಸ್‍ಎಎಸ್ ರೈಫಲ್‍ಗಳಿದ್ದವು. ನಾವೂ ಕೂಡ ಅವರಲ್ಲಿ ಸಾಕಷ್ಟು ಮಂದಿಯನ್ನ ಹತ್ಯೆಗೈದೆವು. ನಕ್ಸಲರು ತಮ್ಮ ರಕ್ಷಣೆಗೆ ಗ್ರಾಮಸ್ಥರನ್ನು ಬಳಸಿಕೊಂಡ್ರು ಎಂದು ಅವರು ತಿಳಿಸಿದ್ದಾರೆ.

ಈ ದಾಳಿ ವೇಳೆ ನಕ್ಸಲರು ಯೋಧರ ಬಳಿಯಿದ್ದ ರೈಫಲ್‍ಗಳನ್ನೂ ತೆಗೆದುಕೊಂಡು ಪರಾರಿಯಾಗಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *