ಗಣೇಶನ ಹಬ್ಬದಂದೇ ಅದ್ಧೂರಿ ಸಾವರ್ಕರ್‌ ಉತ್ಸವ ಆಚರಣೆಗೆ ಸಿದ್ಧತೆ

Public TV
1 Min Read

ಬೆಂಗಳೂರು: ಗಣೇಶನ ಹಬ್ಬಕ್ಕೆ ಸರಿಯಾಗಿ ಇನ್ನೊಂದು ವಾರ ಬಾಕಿ ಇದೆ. ಕೋವಿಡ್‌ ನಿರ್ಬಂಧ ಇಲ್ಲದೇ  ಗಣೇಶೋತ್ಸವದ ಜೊತೆ ಅದ್ಧೂರಿಯಾಗಿ ಸಾವರ್ಕರ್‌ ಉತ್ಸವ ನಡೆಸಲು ಹಿಂದೂ ಸಂಘಟನೆಗಳು ಕರೆ ನೀಡಿವೆ.

ರಾಜ್ಯದ ಜನತೆಗೆ ಸಾವರ್ಕರ್ ಜೀವನ ಚರಿತ್ರೆ, ಸಾವರ್ಕರ್ ಅನುಭವಿಸಿದ ಕಷ್ಟಗಳನ್ನ ಹೇಳ ಹೊರಟಿರುವ ಸಂಘಟನೆಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಯುವಪಡೆಯನ್ನು ಸಿದ್ಧಪಡಿಸಿದೆ. ಇದನ್ನೂ ಓದಿ: ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೀರಿ: ಡಿ.ಕೆ.ಶಿವಕುಮಾರ್

ಪ್ರತಿ ಜಿಲ್ಲೆಯಲ್ಲೂ ಆಸಕ್ತ ಯುವಕ ಯುವತಿಯರಿಗೆ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಾವರ್ಕರ್ ಬಗ್ಗೆ ಭಾಷಣ ಮಾಡಲು ತರಬೇತಿ ನೀಡಲಾಗುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಾಗಾರ ಆರಂಭಿಸಲಾಗಿದೆ.

ಈ ಕಾರ್ಯಾಗಾರದ ಸಂಪೂರ್ಣ ಜವಾಬ್ದಾರಿಯನ್ನ ಯುವಾ ಬ್ರಿಗೇಡ್ ವಹಿಸಿಕೊಂಡಿದೆ. ಈ ಮೂಲಕ ಸಾವರ್ಕರ್ ಉತ್ಸವದಲ್ಲಿ ಅದ್ಧೂರಿ ಭಾಷಣಗಳನ್ನ ಯುವಪಡೆಯ ಮೂಲಕವೇ ಜನರಿಗೆ ತಲುಪಿಸುವ ತಯಾರಿ ನಡೆದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *