ಬೆಂಗಳೂರು: ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣ ಅವರನ್ನೇ ಕೇಳಬೇಕು. ಅವರು ಯಾವ ಅರ್ಥದಲ್ಲಿ ಮಾತಾಡಿದ್ದಾರೆ ಎಂದು ಗೊತ್ತಿಲ್ಲ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಇದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಇದ್ದಾರೆ. ಸದ್ಯಕ್ಕೆ ಅವರ ಸ್ಥಾನ ಅಭಾದಿತ ಎಂದಿದ್ದಾರೆ.
ದಸರಾ ಯಾವ ರೀತಿ ಮಾಡಬೇಕು ಎಂದು ಸಿಎಂ ನೇತೃತ್ವದಲ್ಲಿ ಸಭೆ ಮಾಡಿದ್ದೇವೆ ವಿಜೃಂಭಣೆಯಿಂದ ದಸರಾ ಆಚರಣೆ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದೆ. ಸುಮಾರು 40 ರಿಂದ 50 ಕೋಟಿ ರೂ. ವೆಚ್ಚದಲ್ಲಿ ಆಚರಣೆ ಆಗಬೇಕು ಎಂಬ ಚರ್ಚೆ ಮಾಡಲಾಗಿದೆ. ಉದ್ಘಾಟಕರು ಯಾರು ಎಂದು ತೀರ್ಮಾನ ಮಾಡುವ ಅಧಿಕಾರ ಸಿಎಂ ಅವರಿಗೆ ಕೊಡಲಾಗಿದೆ. ಒಂದೇ ವಿಚಾರಕ್ಕೆ ಸಂಬಂಧಿಸಿದ ನಾಲ್ಕೈದು ಸ್ಥಬ್ಧಚಿತ್ರಗಳು ಇರಬಾರದು ಎಂದು ತೀರ್ಮಾನ ಆಗಿದೆ. ಜನಪರವಾದ ಸ್ತಬ್ಧ ಚಿತ್ರಗಳು ಇರಬೇಕು, ಮೈಸೂರು ಸಂಸ್ಕೃತಿ ಎತ್ತಿ ಹಿಡಿಯುವ ಸ್ತಬ್ಧ ಚಿತ್ರಗಳಿಗೆ ಪ್ರಮುಖ ಆದ್ಯತೆ ಕೊಡಬೇಕೆಂದು ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕೆಲವರಿಗೆ ಸಿಎಂ ಆಗ್ಬೇಕು ಅಂತಿರುತ್ತೆ, ಅಂಥವರೇ ಬದಲಾವಣೆಯ ಊಹಾಪೋಹಗಳನ್ನು ಹಬ್ಬಿಸ್ತಿದ್ದಾರೆ: ಯತೀಂದ್ರ
ಕೋಲಾರ ಶಾಸಕರಿಂದ ಉಸ್ತುವಾರಿ ಬದಲಾವಣೆ ಬೇಡಿಕೆ ವಿಚಾರವಾಗಿ, ಎಲ್ಲರ ಕಣ್ಣಿಗೂ, ತಿನ್ನೋಕು ಬೆಣ್ಣೆ ಕೊಡುವುದು, ಸುಣ್ಣ ಕೊಟ್ಟು ಅಭ್ಯಾಸ ನನಗಿಲ್ಲ. ಅದರ ಬಗ್ಗೆ ನಂಬಿಕೆ ಇಲ್ಲ, ಒಂದೇ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಆಡ್ತಾ ಇರ್ತಾರೆ ಅದೇ ರೀತಿ ಭಿನ್ನಾಭಿಪ್ರಾಯ ಇರುತ್ತದೆ. ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಶಾಸಕರನ್ನು ಕಂಟ್ರೋಲ್ ಮಾಡಲು ಅವರು ಬರ್ತಾ ಇಲ್ಲ ಬೋರ್ಡ್ಗಳಿಗೆ ನಿರ್ದೇಶಕರ ಆಯ್ಕೆ, ಎಂಎಲ್ಸಿಗಳ ಬಗ್ಗೆ ಚರ್ಚೆ ಮಾಡ್ತಾರೆ. ಶಾಸಕರ ಸಮಾಧಾನ ಮಾಡುವುದಾಗಲಿ, ಮಂತ್ರಿಗಳನ್ನ ಸಮಾಧಾನ ಮಾಡಲು ಬರ್ತಾ ಇಲ್ಲ. ಶಾಸಕರ ಸಮಸ್ಯೆ ಬಗೆಹರಿಸಲು ಸಿಎಂ ಹಾಗೂ ಡಿಸಿಎಂ ಇದ್ದಾರೆ. ಯಾವುದೇ ಶಾಸಕರು ಹೋಗಿ ಹೈಕಮಾಂಡ್ ಗೆ ದೂರು ಕೊಟ್ಟಿಲ್ಲ ಎಂದಿದ್ದಾರೆ.
ಶಾಸಕರ, ಸಚಿವರ ಸಮಸ್ಯೆ ಏನಿದ್ದರೂ ಅದನ್ನು ಕೇಳಲು ಸುರ್ಜೇವಾಲ ಬರ್ತಾ ಇದ್ದಾರೆ. ಶಾಸಕರ ತಪ್ಪು ಎಂದು ನಾನು ಹೇಳುವುದಿಲ್ಲ. ಎಲ್ಲಾ ಸಚಿವರ ಕರ್ತವ್ಯ ಶಾಸಕರಿಗೆ ಸಿಗುವುದು, ಶಾಸಕರ ಸಮಸ್ಯೆ ಕೇಳುವುದು, ಸಚಿವರ ಆದ್ಯ ಕರ್ತವ್ಯ ಸಚಿವರು ವಿಫಲ ಆಗಿಲ್ಲ. ಕೆಲವು ಬಾರಿ ಸಿಗದೇ ಇರಬಹುದು. ಅದು ಏನಿದ್ದರೂ ಸರಿ ಮಾಡುವ ಕೆಲಸ ನಾವು ಮಾಡ್ತೀವಿ ಎಂದಿದ್ದಾರೆ. ಇದನ್ನೂ ಓದಿ: Mysuru Dasara | ಸೆ.22ರಿಂದ 11 ದಿನಗಳ ಕಾಲ ವಿಜೃಂಭಣೆಯ ದಸರಾ