ಕೇಂದ್ರ ಬಜೆಟ್ 2018- ಕರ್ನಾಟಕಕ್ಕೆ ಜೇಟ್ಲಿ ನೀಡಿದ್ದು ಏನು?

Public TV
1 Min Read

ಬೆಂಗಳೂರು: 2018ನೇ ಸಾಲಿನ ಕೇಂದ್ರ ಬಜೆಟ್ ಇಂದು ಮಂಡನೆಯಾಗಿದೆ. ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಕರ್ನಾಟಕಕ್ಕೆ ಮೂರು ರೈಲು ಮಾರ್ಗಗಳನ್ನ ಘೋಷಣೆ ಮಾಡಿದ್ದಾರೆ.

ನೂತನವಾಗಿ ಘೋಷಣೆಯಾಗಿರುವ ರೈಲು ಮಾರ್ಗಗಳೆಂದರೆ ಗಂಗಾವತಿ ಟು ಕಾರಟಗಿ 28 ಕಿ.ಮೀ ಹೊಸ ರೈಲು ಮಾರ್ಗ, ಕಲಬುರಗಿ ಟು ಕಮಲಾಪುರಾ -42 ಕಿಲೋಮೀಟರ್, ಬಾಗಲಕೋಟೆ ಟು ಕಜ್ಜಿದೋಣಿ- 30 ಕಿಲೋಮೀಟರ್.

ಇದರ ಜೊತೆಗೆ ಒಟ್ಟು ಹತ್ತು ಮಾರ್ಗಗಳು ಡಬ್ಲಿಂಗ್ ಆಗಲಿವೆ.
* ಬಾಬ್ಲಾದ್ ಟು ಕಲಬುರಗಿ ಡಬ್ಲಿಂಗ್ – 5.42 ಕಿಲೋಮೀಟರ್
* ಗದಗ ಟು ಬನಕಟ್ಟಿ ಡಬ್ಲಿಂಗ್ – 4.98 ಕಿಲೋಮೀಟರ್
* ಗಣಗಾಪುರ್ ರೋಡ್ ಟು ಹುಣಸಿಹಾಡಿಗಿಲ್ – 6.58 ಕಿಲೋಮೀಟರ್
* ಹರ್ಲಾಪುರ್ ಟು ಕಣಗಿಹಾಳ್ – 9.83 ಕಿಲೋಮೀಟರ್
* ಹುಬ್ಬಳ್ಳಿ ದಕ್ಷಿಣ ಟು ಸವಣೂರು – 51 ಕಿಲೋಮೀಟರ್
* ಹುಲಕೋಟಿ ಟು ಅಣ್ಣಿಗೇರಿ – 10.06 ಕಿಲೋಮೀಟರ್
* ಹುಣಸಿಹಾಡಿಗಿಲ್ ಟು ಸವಳಗಿ – 7.05 ಕಿಲೋಮೀಟರ್
* ಸವಳಗಿ – ಬಾಬ್ಲದ್ ಟು 7.58 ಕಿಲೋಮೀಟರ್
* ತೋಳಹುಣಸೆ ಟು ಹರಿಹರ – 23 ಕಿಲೋಮೀಟರ್
* ತುಮಕೂರು ಟು ಗುಬ್ಬಿ – 18 ಕಿಲೋಮೀಟರ್
* ಕೊಪ್ಪಳ ಟು ಗಿಣಿಗೇರಾ ಟು ಮುನಿರಬಾದ್ – 21.83 ಕಿಲೋಮೀಟರ್

ಬೆಂಗಳೂರಿಗೆ ಸಬ್ ಅರ್ಬನ್ ರೈಲು ಹಾಗೂ ಐಸ್ಯಾಕ್ ಸಂಶೋಧನಾ ಕೇಂದ್ರವನ್ನು ಘೋಷಣೆ ಮಾಡಲಾಗಿದೆ. ಒಟ್ಟು ರೈಲ್ವೆಗೆ 1.48 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದ್ದರೆ ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಯುನಾನಿ ಮೆಡಿಸಿನ್ ಗೆ 12.50 ಕೋಟಿ ರೂ. ಅನುದಾನ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *