ಬೆಂಗಳೂರು ಮಕ್ಕಳು ಮಂಗಳೂರಿನಲ್ಲಿ ಪತ್ತೆ ಪ್ರಕರಣ- ನಾಲ್ವರ ಟ್ರಾವೆಲ್ ಹಿಸ್ಟರಿ ಇಲ್ಲಿದೆ

Public TV
1 Min Read

– ಡಸ್ಟ್ ಬಿನ್‍ಗೆ ಚಿನ್ನ ಎಸೆದಿದ್ದ ಯುವತಿ

ಮಂಗಳೂರು: ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದ 7 ಮಂದಿಯಲ್ಲಿ ಇದೀಗ ಉಳಿದ ನಾಲ್ವರು ಕೂಡ ಪತ್ತೆಯಾಗಿದ್ದಾರೆ. ಮಕ್ಕಳನ್ನು ಯುವತಿ ಎಲ್ಲೆಡೆ ಸುತ್ತಾಡಿಸಿದ್ದು, ಈ ಮಕ್ಕಳ ಟ್ರಾವೆಲ್ ಹಿಸ್ಟರಿ ಇಲ್ಲಿದೆ.

ಹೌದು. ಮಕ್ಕಳು ಹಾಗೂ ಯುವತಿಯನ್ನು ಪಾಂಡೇಶ್ವರ ಠಾಣೆಯಲ್ಲಿ ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿ, ಮಕ್ಕಳನ್ನು ಕರೆದುಕೊಂಡು ಎಲ್ಲೆಡೆ ಸುತ್ತಾಡಿರುವುದು ಬಯಲಾಗಿದೆ. ಇದನ್ನೂ ಓದಿ: ಬೆಂಗಳೂರಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ!

ಬೆಂಗಳೂರಿನಿಂದ ಬೆಳಗಾವಿಗೆ ನಂತರ ಬೆಳಗಾವಿಯಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೆ ಮತ್ತೆ ಮೈಸೂರಿನಿಂದ ರೈಲಿನಲ್ಲಿ ಬೆಂಗಳೂರು ಮೆಜೆಸ್ಟಿಕ್ ಗೆ ತೆರಳಿದ್ದಾರೆ. ಪುನಃ ಮೆಜೆಸ್ಟಿಕ್ ನಿಂದ ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸಿರುವುದಾಗಿ ಯುವತಿ ಬಾಯ್ಬಿಟ್ಟಿದ್ದಾಳೆ.

ಡಸ್ಟ್ ಬಿನ್‍ಗೆ ಚಿನ್ನ ಎಸೆದ ಯುವತಿ:
ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ಯುವತಿ ಚಿನ್ನಾಭರಣವನ್ನು ಡಸ್ಟ್‍ಬಿನ್‍ಗೆ ಎಸೆದಿರುವುದಾಗಿ ತಿಳಿಸಿದ್ದಾಳೆ. ಮಕ್ಕಳು ಮನೆಯಿಂದ ತಂದಿದ್ದ ಚಿನ್ನಾಭರಣದೊಂದಿಗೆ ಯುವತಿ ನಾಪತ್ತೆಯಾಗುವ ಪ್ಲಾನ್ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಬಸ್ಸಿನಿಂದ ಇಳಿದು ಕೈಯಲ್ಲಿದ್ದ ಚಿನ್ನಾಭರಣವನ್ನು ಡಸ್ಟ್ ಬಿನ್‍ಗೆ ಎಸೆದಿದ್ದು, ಸದ್ಯ ಚಿನ್ನಾಭರಣವನ್ನು ಡಸ್ಟ್ ಬಿನ್ ನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *