ರಾಜೀನಾಮೆ ನೀಡಿ ಸರ್ಕಾರಿ ಮೊಬೈಲ್ ಮೇಜ್ ಮೇಲಿಟ್ಟು ಹೊರಟೇ ಬಿಟ್ರು ಹೆಬ್ರಿ ಠಾಣಾ ಎಸ್‍ಐ!

Public TV
0 Min Read

ಉಡುಪಿ: ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಉಡುಪಿ ಜಿಲ್ಲೆಯ ಹೆಬ್ರಿ ಠಾಣಾ ಎಸ್‍ಐ ರಾಜೀನಾಮೆ ನೀಡಿದ್ದಾರೆ.

ಹೆಬ್ರಿ ಎಸ್‍ಐಗೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದಾರಂತೆ. ಹಾಗಾಗಿ ಎಸ್‍ಐ ರಾಜೀನಾಮೆ ನೀಡಿ ಠಾಣೆಯಿಂದ ತೆರಳಿದ್ದಾರೆ. ಸರ್ಕಾರಿ ಮೊಬೈಲ್ ಮೇಜಿನ ಮೇಲಿಟ್ಟು ಠಾಣೆಯಿಂದ ಎಸ್ ಐ ಮಹಾಬಲ ಶೆಟ್ಟಿ ಹೊರಟು ಹೋಗಿದ್ದಾರೆ.

ಸಿವಿಲ್ ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಹಿರಿಯ ಅಧಿಕಾರಿಗಳ ತರಾಟೆಗೆ ಮನನೊಂದು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಎಸ್ ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿ ಎಸ್ ಐ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದು, ಮನವೊಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *