ಧಾರವಾಡ: ಒಂದು ವಾರದಿಂದ ಧಾರವಾಡದಲ್ಲಿ (Dharwad) ಸುರಿಯುತ್ತಿರುವ ಮಳೆಯಿಂದಾಗಿ (Rain) ಕೇವಲ ಮನೆಗಳಷ್ಟೇ ಅಲ್ಲ ಸಾರಿಗೆ ಸಂಸ್ಥೆಯ ಬಸ್ಗಳೂ (Bus) ಸೋರುವ ಸ್ಥಿತಿಗೆ ತಲುಪಿದೆ.
ಧಾರವಾಡ ನಗರ ಸಿಬಿಟಿ ಬಸ್ ನಿಲ್ದಾಣದಿಂದ ವಿವಿಧ ನಗರಗಳಿಗೆ ಹೋಗುವ ಬಸ್ಗಳು ಮಳೆಯಿಂದ ಸೋರುತ್ತಿವೆ. ಶ್ರೀರಾಮನಗರದಿಂದ ಸಿಬಿಟಿಗೆ ಬರುವ ಸಾರಿಗೆ ಸಂಸ್ಥೆಯ ಬಸ್ ಒಂದು ಸೋರುತ್ತಿತ್ತು. ಇದರಿಂದ ಪ್ರಯಾಣಿಕರೊಬ್ಬರು ಬಸ್ನಲ್ಲೇ ಕೊಡೆ (Umbrella) ಹಿಡಿದು ಕುಳಿತು ಪ್ರಯಾಣಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಮುಂದುವರಿದ ಭಾರೀ ಮಳೆ – ಶಾಲೆಗಳಿಗೆ ನಾಳೆಯೂ ರಜೆ ಘೋಷಣೆ
ಸದ್ಯ ಈ ವೀಡಿಯೋ ವೈರಲ್ ಆಗಿದೆ. ಅಲ್ಲದೇ ಇದು ನಮ್ಮ ಸಾರಿಗೆ ಇಲಾಖೆಯ ಸ್ಥಿತಿ ನೋಡಿ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: KRS ಡ್ಯಾಂ 3 ಅಡಿ ಭರ್ತಿ – 29,552 ಕ್ಯೂಸೆಕ್ ನೀರು ಒಳಹರಿವು
Web Stories