ಮಳೆ ಇಳಿಮುಖ: ಮೈಸೂರು – ಮಡಿಕೇರಿ ಹೆದ್ದಾರಿ ಓಪನ್

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು ಮೈಸೂರು – ಬಂಟ್ವಾಳ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭಗೊಂಡಿದೆ.

ಕುಶಾಲನಗರ ಸಮೀಪದ ಕೊಪ್ಪ ಬಳಿ ಸೇತುವೆ ಮೇಲೆ ಕಾವೇರಿ ನೀರು ಹರಿದ ಪರಿಣಾಮ ಶುಕ್ರವಾರ ಸಂಜೆಯಿಂದ ರಸ್ತೆ ಸಂಚಾರ ಬಂದ್ ಆಗಿತ್ತು. ಈಗ ಮಳೆ ತಗ್ಗಿದ್ದು ರಸ್ತೆಯ ಮೇಲಿದ್ದ ನೀರು ನದಿಗೆ ಹೋಗುತ್ತಿದೆ. ಹೀಗಾಗಿ ಭಾನುವಾರ ಮಧ್ಯಾಹ್ನದ ಬಳಿಕ ಸಂಚಾರ ಆರಂಭಗೊಂಡಿದೆ.

ಚಾರ್ಮಾಡಿ, ಶಿರಾಡಿ ಘಾಟ್ ರಸ್ತೆಗಳು ಬಂದ್ ಆದ ಪರಿಣಾಮ ಮಂಗಳೂರು ಕಡೆ ತೆರಳಲು ಇದೊಂದು ಮಾರ್ಗವನ್ನು ಜನ ಅವಲಂಬಿಸಿದ್ದರು. ಆದರೆ ಈ ಮಾರ್ಗವೂ ಬಂದ್ ಆಗಿದ್ದರಿಂದ ಪ್ರಯಾಣಿಕರು ಪರದಾಡಿದ್ದರು. ಬೆಂಗಳೂರಿನಿಂದ ಮಂಗಳೂರು ಕಡೆ ಹೊರಟ್ಟಿದ್ದ ಹಲವು ಬಸ್ಸುಗಳು ಕುಶಾಲನಗರಕ್ಕೆ ಬಂದು ಮರಳಿ ವಾಪಸ್ ಬೆಂಗಳೂರಿಗೆ ಬಂದಿದ್ದವು.

Share This Article
Leave a Comment

Leave a Reply

Your email address will not be published. Required fields are marked *