ಮಲೆನಾಡಲ್ಲಿ ಮಳೆರಾಯನ ಅಬ್ಬರ – ಗಾಜನೂರಲ್ಲಿರುವ ತುಂಗಾ ಡ್ಯಾಂ ಭರ್ತಿ

Public TV
1 Min Read

ಶಿವಮೊಗ್ಗ: ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಮುಖ್ಯವಾಗಿ ಕೊಪ್ಪ, ಶೃಂಗೇರಿ ಹಾಗೂ ನದಿ ಸಾಗಿ ಬರುವ ತೀರ್ಥಹಳ್ಳಿ ತಾಲೂಕುಗಳಲ್ಲಿ ಕಳೆದ ಎರಡು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವುದರಿಂದ ಗಾಜನೂರು ತುಂಗಾ ಡ್ಯಾಂ ಭರ್ತಿಯಾಗಿದೆ.

ಡ್ಯಾಂನ 20 ಗೇಟುಗಳನ್ನೂ ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. 3.24 ಟಿಎಂಸಿ ಸಾಮರ್ಥ್ಯದ ಈ ಅಣೆಕಟ್ಟೆಯಿಂದ ಈಗ ಸರಾಸರಿ 15 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಈ ಅಣೆಕಟ್ಟೆ ತುಂಬಿದಾಗ ವಿದ್ಯುತ್ ಉತ್ಪಾದನೆಯನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ಐದು ಸಾವಿರ ಕ್ಯೂಸೆಕ್ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೂವರೆಗೂ ತಳದಲ್ಲೇ ಇದ್ದ ತುಂಗಾ ನದಿ ಈಗ ಮೈದುಂಬಿ ಹರಿಯುತ್ತಿದೆ. ತುಂಬಿದ ಅಣೆಕಟ್ಟೆ ನೋಡಲು ಶಿವಮೊಗ್ಗ ಸೇರಿ ಹೊರ ಭಾಗಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *