ನಿನ್ನೆ ತಮ್ಮ ಇವತ್ತು ಅಣ್ಣನಿಗೆ ಹೃದಯಾಘಾತ -ಮರಳು ದಂಧೆ ಆರೋಪಿಗಳಿಗೆ ಜೈಲಲ್ಲೇ ಹಾರ್ಟ್ ಅಟ್ಯಾಕ್

Public TV
1 Min Read

ಬಳ್ಳಾರಿ: ಜೈಲಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಮರಳು ದಂಧೆಯ ಆರೋಪಿಯ ಸಹೋದರನಿಗೂ ಇಂದು ಜೈಲಿನಲ್ಲಿ ಹೃದಯಾಘಾತವಾಗಿದೆ.

ಕಳೆದ ಗುರುವಾರ ಕೌಲ್‍ಬಜಾರ್‍ನ ನಿಸಾರ್ ಅಹ್ಮದ್ ಮತ್ತು ಖಾದರ್ ಬಾಷಾ ಎಂಬ ಸಹೋದರರನ್ನು ಅಕ್ರಮ ಮರಳು ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸೋಮವಾರ ಜೈಲಿನಲ್ಲಿ ನಿಸಾರ್ ಅಹ್ಮದ್ ಹಾರ್ಟ್ ಅಟ್ಯಾಕ್ ಆಗಿತ್ತು. ಕೂಡಲೇ ನಿಸಾರ್ ರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಸಾರ್ ಮೃತಪಟ್ಟಿದ್ದರು.

ಇತ್ತ ಜೈಲಿನಲ್ಲಿದ್ದ ಅಣ್ಣ ಖಾದರ್ ಬಾಷಾರಿಗೆ ತಮ್ಮನ ಸಾವಿನ ಸುದ್ದಿ ಕೇಳಿದ ಕೂಡಲೇ ಹೃದಯಾಘಾತವಾಗಿದೆ. ತಕ್ಷಣ ಜೈಲಿನ ಸಿಬ್ಬಂದಿ ಖಾದರ್ ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿನ್ನೆ ಮೃತಪಟ್ಟ ನಿಸಾರ್ ಅಹ್ಮದ್ ಅಂತ್ಯಕ್ರಿಯೆ ಇವತ್ತು ನಡೆಯಲಿದ್ದು, ಪೊಲೀಸರು ನಗರ ಮತ್ತು ವಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಿದ್ದಾರೆ. ಸಾವಿಗೆ ಪೊಲೀಸರೇ ಕಾರಣ ಅಂತ ಸಂಬಂಧಿಕರು ರಂಪಾಟ ನಡೆಸಿ ಎಸ್‍ಪಿಗೂ ಘೇರಾವ್ ಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *