ಕೆಳಗೆ ಮಲಗಿದ್ದರೂ ಬಾಲಕಿಯನ್ನ ಮಾತಾಡಿಸ್ಲಿಲ್ಲ- ತುಮಕೂರಲ್ಲಿ ಹೆಲ್ತ್ ಮಿನಿಸ್ಟರ್ ದರ್ಪ

Public TV
1 Min Read

ತುಮಕೂರು: ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ಸೇವೆ ಹಾಗೂ ಅಧಿಕಾರಿಗಳ ಕಾರ್ಯ ವೈಖರಿಯನ್ನು ಪರಿಶೀಲನೆ ನಡೆಸಲು ಆಯಾ ಇಲಾಖೆ ಸಚಿವರು, ಉನ್ನತ ಅಧಿಕಾರಿಗಳು ಭೇಟಿ ನೀಡುವುದು ಸಾಮಾನ್ಯ. ಇದರಂತೆ ಆರೋಗ್ಯ ಸಚಿವರಾದ ಶಿವಾನಂದ ಪಾಟೀಲ್ ಅವರು ಇಂದು ಜಿಲ್ಲೆಯ ಆಸ್ಪತ್ರಗೆ ಭೇಟಿ ನೀಡಿದ್ದರು. ಆದರೆ ಸಚಿವರು ಭೇಟಿ ನೀಡಿದ ವೇಳೆಯೂ ಕೂಡ ಬಾಲಕಿಯೊಬ್ಬಳು ನೆಲದ ಮೇಲೆ ಮಲಗಿ ಚಿಕಿತ್ಸೆ ಪಡೆಯುತ್ತಿದ್ದರೂ ಸಚಿವರು ಕಂಡು ಕಾಣದಂತೆ ತೆರಳಿದ್ದಾರೆ.

ತಮ್ಮ ಭೇಟಿ ವೇಳೆ ಆಸ್ಪತ್ರೆ ಒಳಬಂದ ಸಚಿವರು ರೋಗಿಗಳನ್ನು ವಿಚಾರಿಸದೇ ತೆರಳಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ನೆಲದ ಮೇಲೆ ಬಾಲಕಿ ಮಲಗಿರುವುದನ್ನು ಕಂಡ ವೈದ್ಯರು ಮಾತನಾಡಿಸದೇ ಮುಂದೆ ಸಾಗಿದ್ದಾರೆ. ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲಾ ವಾರ್ಡ್ ಗಳಲ್ಲಿ ಸುತ್ತಾಡಿ ಸಮಯ ವ್ಯರ್ಥ ಮಾಡಿದ್ದಾರೆ.

ಆಸ್ಪತ್ರೆಯ ವಾರಂಡದಲ್ಲಿ ಮಲಗಿದ್ದ ಬಾಲಕಿಯನ್ನ ಸೌಜನ್ಯಕ್ಕೂ ಮಾತನಾಡಿಸದೇ ಮುಂದೆ ಸಾಗಿದರು. ಸಚಿವರು ಆಗಮಿಸುತ್ತಿದ್ದಾಗ ಬಾಲಕಿ ಮಲಗಿದ್ದಳು. ಇದನ್ನು ಕಂಡ ಓರ್ವ ಎದ್ದೇಳು ಎಂದು ಹೇಳಿದ್ದರೂ ಕೂಡ ಸಚಿವರು ಗಮನಿಸದೇ ಮುಂದೆ ಸಾಗಿದ್ದಾರೆ. ವಾರ್ಡ್ ಗಳಲ್ಲಿ ಕೂಡ ಸಂಬಂಧ ಪಟ್ಟ ಅಧಿಕಾರಿಗಳ ಹತ್ತಿರ ಮಾತ್ರ ಮಾಹಿತಿ ಪಡೆದು ತೆರಳಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಾಲಕಿಯ ಅಜ್ಜಿ, ಬಾಲಕಿಗೆ ಕೆಮ್ಮು ಜ್ವರ ಇತ್ತು. ಆದ್ದರಿಂದ ವೈದ್ಯರು ಬರುತ್ತಾರೆ ಎಂದು ಕಾದು ಕುಳಿತ್ತಿದ್ದೆವು. ಬಾಲಕಿಯ ತಾಯಿ ಕೂಡ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದು, ಆದ್ದರಿಂದ ನಾವು ವರಾಂಡದಲ್ಲೇ ಮಲಗಿದ್ದಾಗಿ ತಿಳಿಸಿದ್ದಾರೆ.

ಸುಳ್ವಾಡಿ ಪ್ರಕರಣದ ಸಂದರ್ಭದಲ್ಲೂ ಸಚಿವರು ಭೇಟಿ ನೀಡದೇ ಬೇಜವಾಬ್ದಾರಿ ಉತ್ತರ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *