ಪ್ರತಾಪ್ ಸಿಂಹರನ್ನು ದನಕ್ಕೆ ಹೋಲಿಸಿದ ಸಚಿವ ರಮೇಶ್ ಕುಮಾರ್

Public TV
1 Min Read

ಗದಗ: ಆರೋಗ್ಯ ಸಚಿವ ರಮೇಶ್ ಕುಮಾರ್ ಮೈಸೂರು ಸಂಸದ ಪ್ರತಾಪ್ ಸಿಂಹರನ್ನು ದನಕ್ಕೆ ಹೋಲಿಕೆ ಮಾಡಿ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ.

ನಗರದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಲೇಖನ ಬರೆಯುವ ಅವಕಾಶ ಸಿಕ್ಕಿದೆ ಎಂದು ಲೋಕಸಭಾ ಸದಸ್ಯರಾದ ಮಾತ್ರಕ್ಕೆ ನೆಹರೂ ಅವರನ್ನು ಹಿಯಾಳಿಸಿ ಬರೆಯುತ್ತಾರೆ. ದನಗಳಿಗೆ ಭಾಷೆ ಇಲ್ಲ, ಜನರಿಗೆ ಭಾಷೆ ಇದೆ. ಭಾಷೆಯ ಪ್ರಯೋಗ ಯೋಗ್ಯ ರೀತಿಯಲ್ಲಿ ಮಾಡದೇ ಹೋದರೆ ಜನರಿಗೆ ದನಗಳಿಗೆ ವ್ಯತ್ಯಾಸ ಇರುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಇದೇ ವೇಳೆ ಈ ದೇಶದಲ್ಲಿ ಯಾರು ಯಾರ ಬಗ್ಗೆ ಮಾತಾಡಬೇಕು ಎನ್ನುವ ಸಂಹಿತೆಯೂ ಇರದಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಂಸದರು ಸಂಸತ್ ನಲ್ಲಿ ಯಾವ ಭಾಷೆ ಬಳಸಬೇಕು, ಹೊರಗೆ ಯಾವ ಭಾಷೆ ಬಳಸಬೇಕು ಎನ್ನುವ ಸಂಯಮ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *