ಸಿಎಂ ಯಾರಾಗ್ತಾರೆ ಅನ್ನೋ ನಿರ್ಧಾರ ಮಾಡೋದು ಎಚ್‍ಡಿಡಿ: ಶಾ ನಿವಾಸದ ಮುಂದೆ ಜ್ಯೋತಿಷಿ ಭವಿಷ್ಯ

Public TV
1 Min Read

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಪ್ರಯತ್ನಪಟ್ಟರೆ ಮಾತ್ರ ಸರಳ ಬಹುಮತಗಳಿಸುತ್ತದೆ. ಇಲ್ಲವಾದರೆ ರಾಜ್ಯದಲ್ಲಿ ಸಿಎಂ ಪಟ್ಟ ಯಾರಿಗೆ ಅನ್ನೋದು ದೇವೇಗೌಡರ ಕೈಯಲ್ಲಿರುತ್ತದೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಚುನಾವಣೆಯ ಕುರಿತಂತೆ ಭವಿಷ್ಯ ತಿಳಿಸಲು ಶಿರಸಿಯ ಶ್ರೀಕಾಂತ್ ಭಟ್ ಎಂಬವರು ಅಮಿತ್ ಶಾ ಅವರ ನಿವಾಸದ ಬಳಿ ಆಗಮಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಮನೆ ಒಳ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದರು. ಹೀಗಾಗಿ ಅಮಿತ್ ಶಾ ಮನೆಯ ಮುಂದೆ ನಿಂತು ಮಾಧ್ಯಮಗಳ ಜೊತೆ ತನ್ನ ಭವಿಷ್ಯವಾಣಿಯನ್ನು ಹೇಳಿದರು.

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರ ಬಹುಮತ ಪಡೆಯುವುದಿಲ್ಲ. ಆದರೆ ಪ್ರಯತ್ನಪಟ್ಟರೆ ಬಿಜೆಪಿಗೆ ಬಹುಮತ ಬರಬಹುದು. ಬಿಜೆಪಿಯಲ್ಲಿ 2, 3 ಸಾವಿರ ಮತಗಳ ಅಂತರದಲ್ಲಿ ಸೋಲುವ ಅಭ್ಯರ್ಥಿಗಳು ಇದ್ದಾರೆ. ಅವರ ಕುರಿತು ತಾನು ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

ಬಿಜೆಪಿ ನಾಯಕರು ಪಕ್ಷದಲ್ಲಿನ ಈ ತಪ್ಪುಗಳನ್ನು ಸರಿಪಡಿಸಿಕೊಂಡಿಲ್ಲ ಎಂದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಾರೆ. ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎಂಬುವುದನ್ನು ಮಾಜಿ ಪ್ರಧಾನಿ ದೇವೇಗೌಡ ಅವರು ನಿರ್ಧರಿಸುತ್ತಾರೆ.

ಅತಂತ್ರ ಸರ್ಕಾರ ಬಂದರೆ ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗಲು ಸಾಧ್ಯವಿಲ್ಲ. ಇನ್ನು ಹೆಚ್‍ಡಿ ರೇವಣ್ಣಗೆ ಸಿಎಂ ಆಗುವ ಅದೃಷ್ಟ ಇಲ್ಲದಿದ್ದರೂ, ಡಿಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *