ಬಹಿರಂಗವಾಗಿ ಸೇಬಿನ ಹಾರ ಹರಾಜು: ಸಂಗ್ರಹವಾದ ಹಣವನ್ನು ಅಭ್ಯರ್ಥಿಗೆ ನೀಡಿದ ಎಚ್‍ಡಿಡಿ

Public TV
1 Min Read

ಮಂಡ್ಯ: ತಮಗೆ ಹಾಕಿದ ಸೇಬಿನ ಹಾರವನ್ನು ಹರಾಜು ಹಾಕಿ ಆ ಹಣವನ್ನು ತಮ್ಮ ಪಕ್ಷದ ನಾಗಮಂಗಲ ಕ್ಷೇತ್ರದ ಅಭ್ಯರ್ಥಿ ಸುರೇಶ್‍ಗೌಡ ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು ನೀಡಿದ್ದಾರೆ.

ನಾಗಮಂಗಲ ಕ್ಷೇತ್ರ ವ್ಯಾಪ್ತಿಗೆ ಬರುವ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ತಮ್ಮ ಪಕ್ಷದ ಅಭ್ಯರ್ಥಿ ಸುರೇಶ್‍ಗೌಡ ಪರವಾಗಿ ಪ್ರಚಾರ ಮಾಡಲು ಆಗಮಿಸಿದ್ದರು. ಈ ವೇಳೆ ದೇವೇಗೌಡರಿಗೆ ಅಭಿಮಾನಿಗಳು ಸುಮಾರು 200ಕೆಜಿ ತೂಕದ ಸೇಬಿನ ಹಾರ ಹಾಕಿದ್ದರು.

ಸೇಬಿನ ಹಾರವನ್ನು ವೇದಿಕೆಯ ಮೇಲೆ ಹರಾಜು ಹಾಕಲಾಯಿತ್ತು. ಮೊದಲು ಮಾಜಿ ಶಾಸಕ ಶಿವರಾಮೇಗೌಡ ಸೇಬಿನ ಹಾರಕ್ಕೆ ಒಂದು ಲಕ್ಷ ಬೆಲೆ ಕಟ್ಟಿದ್ದರು. ನಂತರ ಬೆಟ್ಟೇಗೌಡ ಸೇಬಿನ ಹಾರಕ್ಕೆ ಮೂರು ಲಕ್ಷ ಬೆಲೆ ಕಟ್ಟಿದ್ದರು. ಅವರನ್ನೂ ಮೀರಿಸಿ ಬೆಂಗಳೂರಿನ ಜೆಡಿಎಸ್ ಮುಖಂಡರೊಬ್ಬರು ಸೇಬಿನ ಹಾರಕ್ಕೆ ಮೂರೂವರೆ ಲಕ್ಷ ಬೆಲೆ ಕಟ್ಟಿದ್ದರು.

ನಂತರ ಐದು ಲಕ್ಷಕ್ಕೆ ಹರಾಜು ಕೂಗಲಾಯಿತ್ತು. ಅಂತಿಮವಾಗಿ ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಾಗರತ್ನಸ್ವಾಮಿ ಸೇಬಿನ ಹಾರವನ್ನು ಆರು ಲಕ್ಷಕ್ಕೆ ಹರಾಜಿನಲ್ಲಿ ಕೊಂಡುಕೊಂಡರು. ಹರಾಜಿನ ನಂತರ ವೇದಿಕೆಯಲ್ಲೇ ಜೆಡಿಎಸ್ ಮುಖಂಡರು ಒಂದೊಂದು ಸೇಬನ್ನು ತಿಂದು ರುಚಿ ನೋಡಿದ್ದು ವಿಶೇಷವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *