ಎಚ್‍ಡಿಡಿ, ಕುಮಾರಸ್ವಾಮಿ ಕುಟುಂಬ ದೊಡ್ಡ ನಾಟಕ ಕಂಪನಿ: ರೇಣುಕಾಚಾರ್ಯ

Public TV
1 Min Read

ದಾವಣಗೆರೆ: ಸೂರ್ಯ-ಚಂದ್ರರು ಇರೋದು ಎಷ್ಟು ಸತ್ಯನೋ, ಮತ್ತೆ ಮೋದಿ ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಮೋದಿ ವರ್ಸಸ್ ಮಹಾಘಟಬಂಧನ್ ನಡುವೆ ನಡೆಯುತ್ತೆ. ಏಕೆಂದರೆ ಮಹಾಘಟ್ ಬಂಧನ್‍ಗೆ ಯಾರು ನಾಯಕರು ಎನ್ನುವುದೇ ಗೊತ್ತಿಲ್ಲ. ದೇಶಾದ್ಯಂತ ಮೋದಿ ಪರ ಅಲೆ ಹಾಗೂ ಮೋದಿ ಆಡಳಿತ ಇಡೀ ಜಗತ್ತು ಮೆಚ್ಚಿದೆ. ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಳಿಕ ಸುಮಲತಾ ಬಗ್ಗೆ ರೇವಣ್ಣ ಹೇಳಿಕೆ ನೀಡಿದ್ದ ವಿಚಾರದ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕುಟುಂಬ ಅಂಬರೀಶ್ ಕೈ-ಕಾಲು ಹಿಡಿದು ಮಂಡ್ಯದಲ್ಲಿ ಹೆಚ್ಚಿನ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಈಗ ಅಂಬರೀಶ್ ಕುಟುಂಬದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಬದುಕಿದ್ದಾಗ ಅಂಬರೀಶ್ ಅವರನ್ನು ಹೇಗೆ ಬಳಸಿಕೊಂಡರೋ, ಮರಣ ನಂತರ ಅವರಿಗೆ ಗೌರವ ಕೊಡಲಿಲ್ಲ. ಸುಮಲತಾಗೆ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ನಾಟಕೀಯವಾಗಿ ಕ್ಷಮೆಯಾಚಿಸಿದ್ದಾರೆ. ಕುಮಾರಸ್ವಾಮಿ ತಾಕತ್ ಇದ್ದರೆ ರೇವಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದರು.

ಸಚಿವ ಸಂಪುಟದಿಂದ ಕೈಬಿಡದಿದ್ದರೆ ಜಿಡಿಎಸ್ ಸರ್ವನಾಶ ಶತಸಿದ್ಧ. ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬ ದೊಡ್ಡ ನಾಟಕ ಕಂಪನಿ. ಅವರಿಗೆ ನಾಟಕ ಆಡುವುದು ಚನ್ನಾಗಿ ಗೊತ್ತು. ನಿಮ್ಮ ಮನೆಯಲ್ಲಿ ಯಾರಾದರೂ ಸತ್ತಿದ್ರೆ ನಿಮ್ಮ ಕುಟುಂಬದವರು ಒಂದೇ ವಾರದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಎಚ್.ಡಿ ರೇವಣ್ಣಗೆ ಶಾಸಕ ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದರು. ಈ ವೇಳೆ ಸುಮಲತಾ ಬಿಜೆಪಿಗೆ ಬಂದರೆ ಸ್ವಾಗತ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *