ತನಿಖೆ ನಡೆಸಿ ಸೋತವರಿಂದ ನಮ್ಮ ವಿರುದ್ಧ ಹತಾಷೆಯ ಮಾತು: ಬಿಸ್‍ವೈಗೆ ಎಚ್‍ಡಿ ರೇವಣ್ಣ ತಿರುಗೇಟು

Public TV
1 Min Read

ಬೆಂಗಳೂರು: ಸದನದಲ್ಲಿ ತಮ್ಮ ವಿರುದ್ಧ ಬಿಎಸ್ ಯಡಿಯೂರಪ್ಪ ಅವರು ಮಾಡಿರುವ ಅರೋಪಗಳಿಗೆ ದಾಖಲೆ ಬಿಡುಗಡೆ ಮಾಡಲಿ. ಆದರೆ ಅವರ ಹೇಳಿಕೆಗಳನ್ನು ಗಮನಿಸಿದರೆ ಬಿಎಸ್‍ವೈ ಹತಾಶೆಯಿಂದ ಹೇಳಿಕೆ ನೀಡಿದ್ದಾರೆ ಎನಿಸುತ್ತದೆ ಎಂದು ಎಚ್‍ಡಿ ರೇವಣ್ಣ ತಿರುಗೇಟು ನೀಡಿದ್ದಾರೆ.

ಬಿಎಸ್‍ವೈ ಅವರ ಭಾಷಣದ ಕುರಿತು ಮಾತನಾಡಿದ ಅವರು, ನಮ್ಮ ವಿರುದ್ಧ ಬಿಎಸ್ ಯಡಿಯೂರಪ್ಪ ಅವರು ಅಕ್ರಮ ಮನೆ ಹಂಚಿಕೆ ಆರೋಪ ಮಾಡಿದ್ದಾರೆ. ಈ ಆರೋಪಗಳಿಗೆ ಅವರು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಈ ಕುರಿತು ಅವರೇ ತನಿಖೆ ಮಾಡಿಸಿ ಸೋತಿದ್ದಾರೆ. ಈಗ ಹತಾಶರಾಗಿ ಮತ್ತೆ ಆರೋಪ ಮಾಡಿದ್ದಾರೆ. ಬೇಕಾದರೆ ಇನ್ನೊಮ್ಮೆ ತನಿಖೆ ಮಾಡಿಸಲಿ ಸವಾಲು ಹಾಕಿದರು.

ಇದೇ ವೇಳೆ ಬಿಎಸ್ ವೈ ಅವರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಇಂದಿನ ಭಾಷಣ ವಿರೋಧ ಪಕ್ಷದ ನಾಯಕನ ಭಾಷಣ ಆಗಿರಲಿಲ್ಲ. ಅವರ ಭಾಷಣ ನೋಡಿದಾಗ ಅಯ್ಯೋ ಅನಿಸಿತು. ಅವರ ವಿಕೃತ ಮನಸ್ಸನ್ನು ಪ್ರದರ್ಶನ ಮಾಡಿದ್ದಾರೆ. ಬಿಎಸ್‍ವೈ ಅವರಿಗೆ ವೈರಿ ಅಂದರೆ ನಾನು ಹಾಗೂ ದೇವೇಗೌಡರು ಎಂದರು.

ಕಾಂಗ್ರೆಸ್ ಜೊತೆ ಸರ್ಕಾರ ರಚನೆಯಲ್ಲಿ ತಂದೆ ದೇವೇಗೌಡರ ಪಾತ್ರ ಮಹತ್ವದ್ದು. ಬಿಜೆಪಿ ಜೊತೆ ನಾನು ಹೋದರೆ ಕುಟುಂಬದಿಂದ ಹೊರ ಹಾಕುವುದಾಗಿ ನನಗೆ ಹೇಳಿದ್ದರು. ದೇವೇಗೌಡರು ಸುಮ್ಮನಾಗಿದ್ದಾರೆ ಬಿಜೆಪಿ ಜೊತೆ ಕುಮಾರಸ್ವಾಮಿ ಬರುತ್ತಿದ್ದರು ಎಂಬುವುದು ಅವರ ಮನಸ್ಸಿನ ಇರಬೇಕು. ಹಾಗಾಗಿ ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ನನ್ನ ವಿರುದ್ಧ ವಿಕೃತಿ ಮೆರೆದಿದ್ದಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *