ಚುನಾವಣಾ ಪ್ರಚಾರದಲ್ಲಿ ಸಚಿವ ರೇವಣ್ಣ, ಬಾಲಕೃಷ್ಣ ಕಣ್ಣೀರು

Public TV
1 Min Read

ಹಾಸನ: ಚುನಾವಣಾ ಪ್ರಚಾರದ ಭಾಷಣದ ವೇಳೆ ಶಾಸಕ ಬಾಲಕೃಷ್ಣ ಹಾಗೂ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಕಣ್ಣೀರು ಹಾಕಿದ್ದಾರೆ.

ಹೊಳೆನರಸೀಪುರದ ಮೂಡಲ ಹಿಪ್ಪೆಯಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರದದಲ್ಲಿ ಬಾಲಕೃಷ್ಣ ಮಾತನಾಡಿ, ದೇವೇಗೌಡರು ಸಂಸತ್ ನಲ್ಲಿ ಕೊನೆ ಭಾಷಣ ಎಂದು ಹೇಳುತ್ತಾ ಕಣ್ಣೀರು ಹಾಕಿದ್ರು. ತವರು ಕ್ಷೇತ್ರ ಹಾಸನವನ್ನು ತಮ್ಮ ಮೊಮ್ಮಗನಿಗಾಗಿ ಬಿಟ್ಟು ಕೊಟ್ಟಿದ್ದಾರೆ. ನಮ್ಮ ತಂದೆಯವರ ತ್ಯಾಗ ದೊಡ್ಡದು, ಮೊಮ್ಮಗನ ಭವಿಷ್ಯದ ದೃಷ್ಟಿಯಿಂದ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಟ್ಟಿದ್ದಾರೆ ಹೇಳಿ ಕಣ್ಣೀರು ಹಾಕಿದರು.

ಬಾಲಕೃಷ್ಣ ಅವರು ಭಾಷಣದಲ್ಲಿ ತಂದೆಯ ತ್ಯಾಗದ ಬಗ್ಗೆ ಹೇಳುತ್ತಿದ್ದಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದ ರೇವಣ್ಣ ಸಹ ಭಾವುಕರಾಗಿ ಕಣ್ಣೀರು ಹಾಕಿದರು.

ಮೊಮ್ಮಗನನ್ನು ರಾಜಕೀಯದಲ್ಲಿ ಮುಂದಕ್ಕೆ ತರಬೇಕು ಅನ್ನೋ ಭಾವನೆ ವರ ಮನದಾಳದಲ್ಲಿ ಇದೆ. ಅದನ್ನು ನಾವು ಸ್ವಾಗತ ಮಾಡೋಣ. ಇಂತಹ ರಾಜಕಾರಣಿ ನಮಗೆ ಮತ್ತೆ ಸಿಗುತ್ತಾರೇನ್ರೀ ಎಂದು ಪ್ರಶ್ನಿಸಿ ಬೇಸರಗೊಂಡರು. ಬಾಲಕೃಷ್ಣ ಕಣ್ಣೀರು ಹಾಕುತ್ತಿದ್ದಂತೆ ವೇದಿಕೆಯಲ್ಲೆ ರೇವಣ್ಣ ಕೂಡ ಭಾವುಕರಾದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *