ಬಿಜೆಪಿಯ ನಾಯಕರು ಭೋಗಿಯಾಗಿರೋದ್ರಿಂದ ಯೋಗಿಯನ್ನು ಕರೆಸಿಕೊಂಡಿದ್ದಾರೆ- ಹೆಚ್‍ಡಿಕೆ

Public TV
1 Min Read

ಮಂಗಳೂರು: ಕರ್ನಾಟಕದ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿಯ ನಾಯಕರು ಭೋಗಿಯಾಗಿರೋದ್ರಿಂದ ಯೋಗಿಯನ್ನು ಕರೆಸಿಕೊಂಡಿದ್ದಾರೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಟಿ ವೇಳೆ ಬಿಜೆಪಿ ಜನಸುರಕ್ಷಾ ಜಾಥಾದ ಕುರಿತು ಮಾತನಾಡಿದ ಅವರು, ಕರಾವಳಿಯಲ್ಲಿ ಜನ ಆತಂಕದಲ್ಲಿದ್ದಾರೆ. ರಾಜ್ಯದ ಬೇರೆ ಪ್ರದೇಶಗಳಲ್ಲಿ ಇಂತಹ ಸ್ಥಿತಿ ಇಲ್ಲ. ಹೀಗಾಗಿ ಉತ್ತರಪ್ರದೇಶದ ಯೋಗಿಯನ್ನು ಕರೆಸಿಕೊಂಡಿದ್ದಾರೆ ಅಂದ್ರು.

ಕರ್ನಾಟಕದ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿಯ ನಾಯಕರೆಲ್ಲರು ಭೋಗಿಯಾಗಿರೋದ್ರಿಂದ ಯೋಗಿಯನ್ನು ಕರೆಸಿಕೊಂಡಿದ್ದಾರೆ. ನೂರಾರು ಮಕ್ಕಳನ್ನು ಬಲಿ ತೆಗೆದುಕೊಂಡ ಯೋಗಿಯಿಂದ ಭಾಷಣ ಮಾಡಿಸುತ್ತಿದ್ದಾರೆ. ಆಸ್ಪತ್ರೆಗೆ ಬಂದ ಮಕ್ಕಳ ರಕ್ಷಣೆ ಮಾಡದ ಯೋಗಿಯಿಂದ ಇಲ್ಲಿ ಭಾಷಣ ಮಾಡಿಸಲಾಗುತ್ತಿದೆ ಎಂದು ಟೀಕಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *