ಯಾರ ನಾಯಕತ್ವ ಬಂದ್ರೆ ಕಮಿಷನ್ ಹೋಗುತ್ತೆ ಅಂತ ಜನ ತೀರ್ಮಾನಿಸಲಿ: ಹೆಚ್‌ಡಿಕೆ

1 Min Read

– ನಾನು ಸಿಎಂ ಆಗಿದ್ದಾಗ ಕಮೀಷನ್ ನಡೆಯುತ್ತಿತ್ತು ಅಂತ ಯಾರು ಹೇಳಿಲ್ಲ

ಬೆಂಗಳೂರು: ಯಾರ ನಾಯಕತ್ವ ಬಂದ್ರೆ ಕಮಿಷನ್ ಹೋಗುತ್ತೆ ಅಂತ ಜನ ತೀರ್ಮಾನಿಸಲಿ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ.

ಬಿಜೆಪಿ ಶಾಸಕ ಚಂದ್ರು ಲಮಾಣಿ (Chandru Lamani) ಬಂಧನದ ವಿಚಾರವಾಗಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಈ ವೇಳೆ ನಾನು ಸಿಎಂ ಆಗಿದ್ದಾಗ ಕಮೀಷನ್ ನಡೆಯುತ್ತಿತ್ತು ಅಂತ ಯಾರು ಹೇಳಿಲ್ಲ. ನಾನು 2 ಬಾರಿ ಸಿಎಂ ಆಗಿದ್ದಾಗಲೂ ಪ್ರತಿ ತಿಂಗಳ 30 ರಂದು ಗುತ್ತಿಗೆದಾರ ಮನೆ ಬಾಗಿಲಿಗೆ ಹಣ ಬಿಡುಗಡೆ ಮಾಡೋ ಚೆಕ್ ಹೋಗ್ತಾ ಇತ್ತು. ಅಷ್ಟು ಕಟ್ಟುನಿಟ್ಟಿನಲ್ಲಿ ನಡೆಯುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: 11 ಲಕ್ಷ ಕಮಿಷನ್‌ಗೆ ಬೇಡಿಕೆ – 2 ದಿನಗಳ ಹಿಂದೆಯೇ ಆಡಿಯೋದಲ್ಲಿ ಸಿಕ್ಕಿಬಿದ್ದಿದ್ದ ಚಂದ್ರು ಲಮಾಣಿ!

ಚಂದ್ರು ಲಮಾಣಿ ಲೋಕಾಯುಕ್ತ ಟ್ರ್ಯಾಪ್ (Lokayukta Raid) ವಿಚಾರವನ್ನು ಆ ಶಾಸಕರನ್ನೇ ಕೇಳಬೇಕು. ಸತೀಶ್ ಜಾರಕಿಹೋಳಿ ಎಲ್ಲಾ ಕಾಲದಲ್ಲಿ ಕಮೀಷನ್ ನಡೆಯುತ್ತಿತ್ತು ಅಂತ ಹೇಳಿದ್ದಾರೆ. ನಾನು ಸಿಎಂ ಆಗಿದ್ದಾಗ ಕಮೀಷನ್ ನಡೆಯುತ್ತಿತ್ತು ಅಂತ ಯಾರು ಹೇಳಿಲ್ಲ ಎಂದಿದ್ದಾರೆ.

ಇಂತಹ ವಾತಾವರಣ ಸರಿಯಾಗಬೇಕಾದ್ರೆ ಯಾರ ನಾಯಕತ್ವವನ್ನು ಆಯ್ಕೆ ಮಾಡಿದ್ರೆ ಇಂತಹ ಪರಿಸ್ಥಿತಿ ಸಂಪೂರ್ಣವಾಗಿ ಹೋಗಲಾಡಿಸಬಹುದು ಅಂತ ಜನರು ತೀರ್ಮಾನ ಮಾಡಲಿ ಎಂದಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಶಾಸಕ ಡಾ.ಚಂದ್ರು‌ ಲಮಾಣಿ – ಬಿಜೆಪಿಗೆ ನುಂಗಲಾರದ ತುತ್ತು

Share This Article